ಬಿಸಿಲಿನ ತುಣುಕುಗಳಿಗೆ ಒಂದ್ ಪತ್ರ ಬರೆದು…..: ದೇವರಾಜ್ ಹುಣಸಿಕಟ್ಟಿ ಬರಹ
ಈ ಲೋಕದ ಹಂಗುಗಳು, ದರ್ದುಗಳು ಇರ್ಶೆಯನ್ನೇ ಹಾಸಿ ಹೊದ್ದು ಮಲಗಿವೆ. ಪ್ರೇಮಿಗಳ ಲೆಕ್ಕದಲ್ಲಂತು ಥೇಟ್ ರಾಕ್ಷಸಿ ಸೊರೂಪ… ಇಡೀ ಇತಿಹಾಸದುದ್ದಕ್ಕೂ ಇದು ದಿಟವಾಗಿದೆ… ಇಲ್ಲಾ ಅಂದ್ರೆ ರೋಮಿಯೋ ಜೂಲಿಯಟ್, ಮಮತಾಜ್ ಷಹ ಜಹಾನ್ ಇನ್ನೂ ಅದೆಷ್ಟೋ ಕಥನಗಳು ರೂಪ ಪಡೆದಿರುತ್ತಿರಲಿಲ್ಲ…
ಅಮೃತಾ ಪ್ರೀತಮ್ ಒಂದಷ್ಟು ಕವಿತೆಗಳನ್ನು “ಬಿಸಿಲಿನ ಅದೆಷ್ಟೋ ತುಣುಕುಗಳು” ಎಂಬ ಸಂಕಲನದಡಿ ರಶ್ಮಿ ಎಸ್ ಕನ್ನಡಕ್ಕೆ ಅನುವಾದಿಸಿದ್ದು, ಈ ಸಂಕಲನದ ಕುರಿತು ದೇವರಾಜ್ ಹುಣಸಿಕಟ್ಟಿ ಬರಹ
ಕರ್ವಾಲೋ ಮರು ಓದು, ಒಂದು ಧ್ಯಾನ: ದೇವಿಕಾ ನಾಗೇಶ್ ಬರಹ
ಇರುವೆಯಿಂದ ರಕ್ಷಿಸಿಕೊಳ್ಳಲು ಆ ಪ್ರಾಣಿ ಇದ್ದಕ್ಕಿದ್ದಂತೆ ಪಕ್ಕದ ದೊಡ್ಡ ಮರಕ್ಕೆ ಹಾರಿ ಮರ ಕೂತು ತನ್ನ ದೇಹಕ್ಕೆ ಅಂಟಿಕೊಂಡಿದ್ದ ಕೆಂಪಿರುವೆಗಳನ್ನು ತಿನ್ನತೊಡಗಿತು. ಇದು ಕಂಡು ಆಶ್ಚರ್ಯ ಚಕಿತರಾದ ಲೇಖಕರು ಹಾರೋ ಓತಿಕ್ಯಾತ ಇದು ಎಂದು ಖಾತ್ರಿಯಾದ ಖುಷಿಯಲ್ಲಿ ತನ್ನ ತಂಡದವರನ್ನು ಕೂಗಿ ಕರೆದರು. ಆದರೆ ಹಾರುವ ಓತಿಕ್ಯಾತ ಇದ್ದಲ್ಲಿ ನಿಲ್ಲುತ್ತದೆಯೇ? ಲೇಖಕರು ಅದನ್ನೇ ತದೇಕ ಚಿತ್ತರಾಗಿ ಕಣ್ಣಲ್ಲೇ ಹಿಂಬಾಲಿಸುತ್ತ ತಾವು ಕಂಡ ಈ ಅದ್ಭುತ ಸರೀಸೃಪವನ್ನು ತನ್ನ ತಂಡದವರಿಗೆ ಪರಿಚಯಿಸುವ ಆತುರದಲ್ಲಿದ್ದರು…
ಪೂರ್ಣಚಂದ್ರ ತೇಜಸ್ವಿಯವರ ಪ್ರಮುಖ ಕಾದಂಬರಿ “ಕರ್ವಾಲೋ”ದ ಮರು ಓದು, ದೇವಿಕಾ ನಾಗೇಶ್ ಬರಹ
ಅರಳುವ ಭಾವಲೋಕ: ದೀಪಾ ಗೋನಾಳ ಕವನ ಸಂಕಲನಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಮಾತುಗಳು
ಪ್ರೇಮವೇ ಗೆಲುವುದು ಅನ್ನುವ ಶೀರ್ಷಿಕೆಯನ್ನೇ ನೋಡಿ. ಪ್ರೇಮ ಗೆಲ್ಲುವುದು ʻನಾನುʼ ನೋತಾಗ ಅಲ್ಲವೇ!. ಪ್ರೇಮ ಗೆದ್ದಿತು ಅನ್ನುವುದು ಬರಿಯ ಒಬ್ಬರ, ಪುಣ್ಯವಿದ್ದರೆ ಪಾಲ್ಗೊಂಡ ಇಬ್ಬರ ಮೈಮನಸುಗಳಿಗೆ ಮಾತ್ರ ಗೊತ್ತಿರುವ ಸಂಗತಿಯಾಗಬಹುದು, ಭಾಷೆಯನ್ನು ಬಲ್ಲ ಎಲ್ಲರಿಗೂ ಇದನ್ನು ಮನದಟ್ಟು ಮಾಡಿಸುವುದು ಎಷ್ಟು ಕಷ್ಟ. ಪ್ರೀತಿ ಶೃಂಗಾರದ ಬಯಕೆ, ತವಕ, ನೆನಪು, ಅವನ್ನೆಲ್ಲ ನುಡಿಯಾಗಿ ಕಾಣುವ ಹಂಬಲ ಇವೆಲ್ಲವೂ ಓದುಗರಲ್ಲೂ ಇರಬೇಕು. ಅಂದರೆ ಪ್ರೇಮವನ್ನು ಬಯಸುವ ಓದುಗ ಮನಸೂ ಬೇಕು.
ದೀಪಾ ಗೋನಾಳ ಕವನ ಸಂಕಲನ “ನಿನ್ನ ನೆನಪ ಕುಡಿದವಳು” ಕುರಿತು ಓ.ಎಲ್. ನಾಗಭೂಷಣ ಸ್ವಾಮಿ ಬರಹ
ನಾಯಿಕುರ್ಕನ ನೆರಳಿನಲ್ಲಿ: ವಿಜಯಶ್ರೀ ಹಾಲಾಡಿ ಕೃತಿಯ ಒಂದು ಪ್ರಬಂಧ
ಎಲ್ಲರೂ ಒಟ್ಟಾಗಿ ಅನ್ನ, ತಿಂಡಿ ತಿನ್ನುವಾಗ ಕರಿಯನ ಗಲಾಟೆಯೇ ಗಲಾಟೆ. ಯಾರಿಗೂ ತಿನ್ನಲು ಬಿಡದೆ ತಾನೇ ಎಲ್ಲವನ್ನೂ ಮುಕ್ಕಬೇಕೆನ್ನುವುದು ಅವಳ ಆಸೆ. ಎಂಥಾ ಬೊಬ್ಬೆ! ನನಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿರಲಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕಡೆ ಊಟ ಹಾಕುವ ವ್ಯವಸ್ಥೆ ಮಾಡಿಕೊಂಡೆ. ಆದರೆ ಎಲ್ಲ ಕಡೆಯೂ ಹೋಗಿ ತಾನೇ ಬಾಯಿಹಾಕಿ ಯಾರಿಗೂ ಸರಿಯಾಗಿ ತಿನ್ನಲು ಬಿಡದೆ, ಕರಿಯ ಅವಸ್ಥೆ ಕೊಡುತ್ತಿದ್ದಳು. ಕೊನೆಕೊನೆಗೆ ಕೋಲು ಹಿಡಿದು ಊಟ ಹಾಕುವ ಪರಿಸ್ಥಿತಿ ಬಂದಿತು. ಈ ನಡುವೆ ಪಾಪದ್ದು ದಾಸುಮರಿ ತುಂಬಾ ಕಷ್ಟ ಅನುಭವಿಸಿತು. ಅದಕ್ಕೆ ಬೇಗ ಬೇಗ ತಿನ್ನಲು ಆಗುತ್ತಿರಲಿಲ್ಲ. ಎಲ್ಲವನ್ನೂ ಕರಿಯನೇ ತಿಂದುಹಾಕುತ್ತಿತ್ತು. ಇಷ್ಟೇ ಆಗಿದ್ದರೆ ಹೋಗಲಿ ಅನ್ನಬಹುದಿತ್ತು.
ವಿಜಯಶ್ರೀ ಹಾಲಾಡಿ ಪ್ರಬಂಧಗಳ ಸಂಕಲನ “ಕಾಡಿನ ಸಂಗೀತ” ಕೃತಿಯ ಒಂದು ಪ್ರಬಂಧ ನಿಮ್ಮ ಓದಿಗೆ
ಮಧು ವೈ.ಎನ್. ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಕೆಲವು ಪುಟಗಳು
ಆ ಪದ ಕಿವಿಗೆ ಬೀಳುತ್ತಿದ್ದಂತೆ ಸೈಫೈ ಸಿನಿಮಾಗಳಲ್ಲಿ ರೋಬೋಗಳು ಬ್ಯಾಟರಿ ಡೌನಾಗಿ ತಾನಾಗೆ ಕುಸಿದಂತೆ ಶರತ್ ಕುಸಿದ. ಅವಳು ಹಂಗೇ, ಹಿಂದೆ ಮುಂದೆ ನೋಡದೇ ಅಂದುಬಿಡ್ತಿದ್ದಳು. ಜ್ಯಾಮಿಟ್ರಿ ಬಾಕ್ಸ್ ಮುಚ್ಚಳವನ್ನು ಹಲ್ಲುಗಳನ್ನೆಟ್ಟಿ ತೆಗೆಯುತ್ತಿದ್ದಳು. ಅಸೆಂಬ್ಲಿನಲ್ಲಿ ಆಕಳಿಸುವಾಗ ತುಟಿ ಹರಿಯುವಷ್ಟು ಅಗಲ ಬಾಯಿ ತೆರೆಯುತ್ತಿದ್ದಳು. ಕಿರುನಾಲಗೆಯಿಂದ ಎಂಜಲನ್ನು ಮೋಟಾರಿನಂತೆ ಹಾರಿಸುತ್ತಿದ್ದಳು. ಇಡೀ ಕ್ಲಾಸಿಗೆ ರಾಣಿ, ರೌಡಿ ಎರಡೂ ಆಗಿದ್ದಳು. ಶರತ್ಗೆ ಆಳದಲ್ಲಿ ಅವಳೆಂದರೆ ಭಯ. ತಾನು ಸುಮ್ಮನಿದ್ದರೂ ಆಗಿತ್ತು; ಇಂಥಾ ಬಜಾರ್ಗಿತ್ತಿಯನ್ನು ಕೆಣಕಿ ʼಕಳ್ಳʼ ಅನ್ನಿಸ್ಕೊಳಂಗಾಯ್ತಲ್ಲ ಎಂದು ಕೈಹಿಸುಕಿಕೊಂಡ.
ಮಧು ವೈ.ಎನ್. ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ
ತಾಂತ್ರಿಕ ಕವಿಯ ಮಾಂತ್ರಿಕ ಕವಿತೆಗಳು….: ದೇವರಾಜ್ ಹುಣಸಿಕಟ್ಟಿ ಬರಹ
ಪ್ರೇಮ, ಪ್ರೇಮ ವೈಫಲ್ಯದ ಕುರಿತು ಕವಿತೆಗಳು ನಿಮಗೆ ಈ ಸಂಕಲದಲ್ಲಿ ಢಾಳವಾಗಿಯೇ ಸಿಗುತ್ತವೆ. ಉದಾಹರಣೆಗೆ “ಕಾಳಜಿ”, ಕಟ್ಟಳೆಯೊಳಗೆ “ಗೋರಿ ಅಲ್ಲ ರೆಂಜಿ ಗಿಡ” ಹೀಗೆ ಅನೇಕ ಕವಿತೆಗಳು ನಿಮ್ಮ ವೈಯುಕ್ತಿಕ ಪ್ರೇಮ, ವೈಫಲ್ಯದ ನೋವು ಸುಖ ಎರಡಕ್ಕೂ ಜೊತೆಯಾಗಿ ರಮಿಸುತ್ತವೆ. ಹೀಗೆ ಕವಿಯೊಬ್ಬ ಆಪ್ತವಾಗುತ್ತಲೇ ಹೋಗುತ್ತಾನೆ. ಇಲ್ಲಿ ವೈನು, ವೇಶ್ಯೆ, ಮೆಟ್ಟು, ಪದ, ಕವಿ, ಕವಿತೆ ಹೀಗೆ ಅನೇಕ ವಿಷಯಗಳ ಕವಿತೆಗಳು ನಿಮ್ಮನ್ನ ಮಾಂತ್ರಿಕ ಸ್ಪರ್ಶದಿಂದ ಎದೆ ನೆಲವ ತೇವಗೊಳಿಸದೇ ಇರುವುದಿಲ್ಲ.
ಸದಾಶಿವ ಸೊರಟೂರು ಅವರ “ಗಾಯಗೊಂಡ ಸಾಲುಗಳು” ಕವನ ಸಂಕಲನದ ಕುರಿತು ದೇವರಾಜ್ ಹುಣಸಿಕಟ್ಟಿ ಬರಹ, ನಿಮ್ಮ ಓದಿಗೆ
ಅಮ್ಮಮ್ಮನಾದ ಹೊತ್ತು…: ಡಾ. ಎಚ್.ಎಸ್. ಅನುಪಮಾ ಮಾತುಗಳು
ಅಲ್ಲಿಂದ ಇಲ್ಲಿಯವರೆಗೆ ಅನುದಿನ ಪುಟ್ಟನ ಸುದ್ದಿ, ನೆನಪುಗಳಿಂದಲೇ ಬೆಳಕು ಹರಿಯುತ್ತದೆ, ಕತ್ತಲಾಗುತ್ತದೆ. ಅವ ಮಗುಚಿದ, ಕೂತ, ತೊದಲು ಮಾತನಾಡಿದ, ಎದ್ದ, ನಿಂತ ಎನ್ನುವುದೆಲ್ಲ ನಮ್ಮದೇ ಸಾಧನೆ ಎಂಬಂತಾಗಿದೆ. ಹಲ್ಲು ಕಡಿದು ಮುದ್ದು ಮಾಡುತ್ತ ಮಾಡುತ್ತ ಮುಂದಿನ ಹಲ್ಲು ಸವೆದೇ ಹೋದಂತಿದೆ! ಸಣ್ಣ ಅವಕಾಶ, ಪುರುಸೊತ್ತು ಸಿಕ್ಕರೂ ಬೆಂಗಳೂರಿಗೆ ಹೋಗಿ ಪುಟ್ಟನ ಕಂಡುಬರುವಾ ಅನಿಸುತ್ತದೆ. ಈ ಅಮ್ಮ ತಮ್ಮನ್ನಿಷ್ಟು ಪ್ರೀತಿಸಿದ್ದಳೋ ಇಲ್ಲವೋ ಎಂದು ನಮ್ಮ ಮಕ್ಕಳು ಶಂಕಿಸಬಹುದಾದಷ್ಟು ಬದುಕು ಸೂರ್ಯಮಯವಾಗಿದೆ!
ಡಾ. ಎಚ್.ಎಸ್. ಅನುಪಮಾ ಕವನ ಸಂಕಲನ “ಅಮ್ಮಮ್ಮನ ಕವಿತೆಗಳು” ಕೃತಿಯ ಕುರಿತು ಅವರ ಬರಹ ನಿಮ್ಮ ಓದಿಗೆ
ಕಾಣದ್ದು ಕಾಣಿಸಿದ್ದು…!: ಸುಭಾಷ್ ರಾಜಮಾನೆ ವಿಮರ್ಶಾ ಕೃತಿಯ ಕುರಿತು ಕಲ್ಲೇಶ್ ಕುಂಬಾರ್ ಬರಹ
ಜಗತ್ತಿನ ಬಹುಮುಖ್ಯ ಕೃತಿಗಳನ್ನು ಗುರುತಿಸುವ, ಪರಿಚಯಿಸುವ, ಆ ಮೂಲಕ ಓದುಗರಿಗೆ ದಾಟಿಸುವಂಥ ಪ್ರಾಮಾಣಿಕ ಕೆಲಸವನ್ನು ಸುಭಾಷ್ ರಾಜಮಾನೆ ಅವರು ಮಾಡುತ್ತಿದ್ದಾರೆ. ಅವರ ಈ ಬರಹಗಳನ್ನು ಓದುವುದರ ಮೂಲಕ ಓದುಗನು ಸ್ವಯಂ ಮರಳಿ ಮೂಲ ಕೃತಿಗಳನ್ನು ಓದುವುದಕ್ಕೆ ಉತ್ಸುಕನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಇಲ್ಲ! ಇನ್ನೂ ಹೇಳಬೇಕೆಂದರೆ, ಕೃತಿಕಾರ ಮರೆಯಾಗಿ ಕೃತಿಯೇ ಮುಖ್ಯವಾಗುವುದು, ಹಾಗೂ ಆ ಕೃತಿಯ ಮೂಲಕವೇ ಕೃತಿಕಾರ ಗುರುತಿಸಿಕೊಳ್ಳುವಂತಾಗುವುದು ಒಂದು ಕ್ರಿಯೆ. ಅಂಥ ಲೇಖಕ ಮತ್ತು ಆ ಲೇಖಕನ ಕೃತಿಗಳು ಶಾಶ್ವತವಾಗಿ ನಿಲ್ಲುತ್ತವೆ! ಹಾಗೆ ನಿಲ್ಲಬಹುದಾದ ಲೇಖಕರ ಕೃತಿಗಳನ್ನು ಓದುಗರಿಗೆ ಸುಭಾಷ್ ರಾಜಮಾನೆ ಅವರು ಪರಿಚಯಿಸಿದ್ದಾರೆ.
ಸುಭಾಷ್ ರಾಜಮಾನೆ ವಿಮರ್ಶಾ ಕೃತಿ “ಕಂಡದ್ದು ಕಾಣದ್ದು” ಕುರಿತು ಕಲ್ಲೇಶ್ ಕುಂಬಾರ್ ಬರಹ
ರೂಪಿಸಿದ ಮುಂಬೈ, ರೂಪುಗೊಂಡ ಮುಂಬೈ: ಕೆ. ಸತ್ಯನಾರಾಯಣ ಕೃತಿಯ ಪುಟಗಳು
ನವರೋಜಿ ಶಾಲೆಗೆ ಸೇರಿದ ಕಾಲಾವಧಿ ಎಂತಹುದೆಂದರೆ, ಮುಂಬೈ, ನಗರವಾಗಿ, ಪ್ರಾಂತ್ಯವಾಗಿ, ಶಿಕ್ಷಣ ಕ್ಷೇತ್ರದಲ್ಲಿ ನಾನಾ ರೀತಿಯ ಪ್ರಯೋಗ, ಪರಿವರ್ತನೆಗಳನ್ನು ಕಾಣುತ್ತಿದ್ದ ದಿನಗಳವು. ನೂರಾರು ಕನಸಿಗರು, ಪ್ರಯೋಗಶೀಲರು, ವಿಶಾಲ ಹೃದಯದ ಪಾಶ್ಚಿಮಾತ್ಯರು, ಎಲ್ಲರಿಗೂ ಶಿಕ್ಷಣದ ಬಗ್ಗೆ ಆಸಕ್ತಿ. ಭಾರತೀಯರನ್ನು ಹೊಸ ವಿಚಾರಗಳಿಗೆ, ಕಲಿಯುವ ಪದ್ಧತಿಗಳಿಗೆ ತೆರೆಯುವ ಹುಮ್ಮಸ್ಸು. ನವರೋಜಿ ಈ ಎಲ್ಲ ಕನಸು, ಪ್ರಯೋಗಗಳ ಫಲಾನುಭವಿ. ಮೊದಲನೆಯ ತಲೆಮಾರಿನ ಫಲಾನುಭವಿ.
ಕೆ. ಸತ್ಯನಾರಾಯಣ ಹೊಸ ಕೃತಿ “ದಾದಾಭಾಯಿ ನವರೋಜಿ” ಕೆಲವು ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಇಂದು ನವರೋಜಿ ಅವರ ೨೦೦ನೇ ಹುಟ್ಟುಹಬ್ಬ, ಅದರ ಪ್ರಯುಕ್ತ ಈ ಕೃತಿಯ ಒಂದು ಬರಹ ನಿಮ್ಮ ಓದಿಗೆ









