Advertisement
ಬಿ.ವಿ.ರಾಮಪ್ರಸಾದ್ ಬರೆದ ಈ ದಿನದ ಕವಿತೆ

ಬಿ.ವಿ.ರಾಮಪ್ರಸಾದ್ ಬರೆದ ಈ ದಿನದ ಕವಿತೆ

ಪ್ಯಾಕ್ ಮಾಡಿರುವ ಲಗ್ಗೇಜು

ಮನೆಯ ಮೂಲೆಯಲ್ಲಿ
ಪ್ಯಾಕ್ ಮಾಡಿರುವ ಲಗ್ಗೇಜು
ಎರಡು ದೊಡ್ಡ ಸೂಟ್‌ಕೇಸು
ಒಂದು ಸಣ್ಣ ಸೂಟ್‌ಕೇಸು
ಒಂದು ಬ್ಯಾಕ್‌ಪ್ಯಾಕು
ಒಂದರ ಮೇಲೊಂದು
ಸ್ಥಾವರದಂತೆ.

ಮುಚ್ಚಿರುವ ಆ ಲಗ್ಗೇಜು
ನಿನಗೆ ತೆರೆದಿದೆ ದಾರಿಗಳು
ದೆಲ್ಲಿಗೆ ಅಲ್ಲಿಂದೆಲ್ಲಿಗೆ?
ನಿನ್ನ ಮುಂದಿದೆ ಆಕಾಶದಂತೆ
ಅಸಂಖ್ಯ ಸಾಧ್ಯತೆಗಳ ಬದುಕು.
ಆ ಎರಡು ಸೂಟ್‌ಕೇಸು
ಹಾರುವ ತವಕದಲ್ಲಿರುವ ನಿನಗೆ ರೆಕ್ಕೆಗಳು,
ಗೂಡು ಬಿಡಲೇ ಬೇಕು ಮರಿಹಕ್ಕಿ ಜಂಗಮ.

ಮುಚ್ಚಿರುವ ಆ ಲಗ್ಗೇಜು
ನನಗೆ ನೆನಪುಗಳ ಕಟ್ಟಿಟ್ಟ ಪೆಟ್ಟಿಗೆ.
ಇಷ್ಟೂ ವರ್ಷಗಳ ಪ್ರತಿ ಮಾತು ತೊದಲು,
ಹೆಜ್ಜೆ ಮುಗ್ಗರಿಕೆ, ಮುತ್ತು ಅಪ್ಪುಗೆ,
ಕೊನೆಯಿರದ ಪ್ರಶ್ನೆಗಳ ಸುರಿಮಾಲೆ,
ಮುಚ್ಚಿರುವ ನಡೆದು ಬಂದ ಹಾದಿ.

ಹಕ್ಕಿಗೂ ಬಿಡುಗಡೆ
ಮರಿಹಕ್ಕಿ ಗೂಡು ಬಿಟ್ಟಾಗ
ಅಂತೆ ನಿರುಮ್ಮಳವಾಗಿ ಕಳಿಸಿಕೊಡುತ್ತದೆ.
ನಾನೂ ಕಳಿಸುವೆ, ಕಳವಳದಲ್ಲಿ.
ಮನುಷ್ಯರಿಗೆಲ್ಲಿ ಹಕ್ಕಿಗಳ ನಿರ್ಲಿಪ್ತತೆ?

ಮನೆಯ ಮೂಲೆಯಲ್ಲಿ
ಮನದ ಮೂಲೆಯಲ್ಲಿ
ಪ್ಯಾಕ್ ಮಾಡಿರುವ ಲಗ್ಗೇಜು.

About The Author

ಬಿ.ವಿ. ರಾಮಪ್ರಸಾದ್

ಬಿ.ವಿ. ರಾಮಪ್ರಸಾದ್ ಶಿವಮೊಗ್ಗದವರು. ಇವರು ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರವಾಚಕರಾಗಿದ್ದಾರೆ. ಕೆಲವು ಕಥೆಗಳನ್ನು ಬರೆದಿದ್ದಾರೆ.

3 Comments

  1. Pushpa Margaret James

    Empty Nest😔. Worst stage for parents. After reading this i thought of my daughter. Total silence at home now. After children leaves the nest, we parents feel like there is nothing remained to talk with each other. Seen the birds all these years in our nest and that was our reason to live and now seeing the empty nest😔😥. Prasad Sir, you made me cry today.

    Reply
    • Ramaprasad

      Thank you

      Reply
  2. Pavithra k m Pavithra k m

    ಈ ಕವನದ ಪ್ರತಿ ಸಾಲುಗಳು ನನ್ನಯ ಪ್ರಸ್ತುತ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ……
    Means now I’m going to attend my last semester PG exams so after this exam I have to leave my hostel as well as home to for sake of job.. really it’s an awesome work sir
    Thank you so much ☺️

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ