Advertisement
ಮಂಡಲಗಿರಿ ಪ್ರಸನ್ನ ಬರೆದ ಗಜಲ್

ಮಂಡಲಗಿರಿ ಪ್ರಸನ್ನ ಬರೆದ ಗಜಲ್

ಆಷಾಢದ ಬಿರುಗಾಳಿಯಂತೆ ತೂರಿ ಬಂದವು ನೆನಪುಗಳು
ಹಳೆಯದನು ಮತ್ತೆ ಕೆದಕಿ ಇರಿದು ಕೊಂದವು ನೆನಪುಗಳು

ನೆಮ್ಮದಿಯ ನಿದಿರೆಗೂ ಬಿಡದೆ ಹಿಂಡಿದವು ಕರುಳನು
ಸುಮ್ಮನೆ ಕೂತರೂ ಬೇಗುದಿ ಮಳೆ ತಂದವು ನೆನಪುಗಳು

ನನಗೀಗ ಬೇಕಿರುವುದು ಏಕಾಂತ ಎಂದಷ್ಟೇ ಹೇಳಿದೆ
ಆದರೂ ಹಗಲು ರಾತ್ರಿ ನನ್ನೊಳಗೆ ಬೆಂದವು ನೆನಪುಗಳು

ಕಾಲಚಕ್ರದಲಿ ಎಲ್ಲ ಮರೆಯಬಹುದು ಎಂದರು ಯಾರೋ
ಹಳೆ ಆಲದಮರದಂತೆ ಎದೆಯಾಳ ನಿಂದವು ನೆನಪುಗಳು

ಸಾಕಾಗಿದೆ ಸಾಕಿ ಮತ್ತೆ ಮತ್ತೆ ಈ ಯಾತನೆಗಳ ಸಹವಾಸ
‘ಗಿರಿ’ ನೀ ತೊರೆದರೂ ನಾವು ಬಿಡೆ ಅಂದವು ನೆನಪುಗಳು

 

About The Author

ಮಂಡಲಗಿರಿ ಪ್ರಸನ್ನ

ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ