Advertisement
ಸಚಿನ್‌ಕುಮಾರ ಬ. ಹಿರೇಮಠ ಬರೆದ ಈ ದಿನದ ಕವಿತೆ

ಸಚಿನ್‌ಕುಮಾರ ಬ. ಹಿರೇಮಠ ಬರೆದ ಈ ದಿನದ ಕವಿತೆ

ಯಾರು ಬಡವರು?

ಒಳಗೊಳಗೆ ಅನ್ನಿಸುತ್ತದೆ
ಸ್ವಾಮಿ ಬಡವರೆಂದರೆ ಯಾರು?
ಹಣವಿಲ್ಲದವರು
ಗುಣವಿಲ್ಲದವರು
ಅನೂಚಾನವಾಗಿ ಬದುಕನ್ನು
ಹೊಲಿಯುತ್ತ ಬಂದವರು
ಯಾರು ಬಡವರು?

ಬೆವರಿನ ಘಮಲಿನಲಿ
ಭಟ್ಟಿ ಇಳಿಸಿದ ಕಮಾಯಿಯನು
ಹರಿದ ಕಿಸೆಯೊಳಗೆ ತುಂಬುತ್ತ
ತೇಪೆಗಾಗಿ ಸೂಜಿದಾರ ಹುಡುಕುವವರು
ಸಿಟ್ಟನ್ನು ದವಡೆಗೆ ಸೀಮಿತಗೊಳಿಸಿದ
ನಿಶ್ಶಸ್ತ್ರ ಯೋಧರು

ಗಂಜಿ‌ ಅಂಬಲಿಯೊಳಗೂ ಮುಗುಳು ನಕ್ಕವರು
ಮುಗಿಲ ನೋಡಿ ಭವಿಷ್ಯ ಹೇಳುವವರು
ಉಳ್ಳವರ ಮನೆಯ ಸೈಜುಗಲ್ಲುಗಳಿಗೆ
ಶ್ರಮದ ಮಾಲು ಸವರಿ
ನಿತ್ಯ ದೇವರ ಮೊರೆ ಬೇಡುವ ವಿಹಂಗಮರು
ಇರುಳ ಹೆರಳಲಿ ಶಯನಗೈಯುವ
ಸುಖದವರು

ದೇಹದ ಮೇಲೆ ಎದೆಯ ಗೂಡಿನ ಚಿತ್ರವುಳ್ಳವರು
ಹೆಪ್ಪು ಮೊಸರನು ಹಂಚಿ ತುಪ್ಪ ತಿಂದವರು
ಹೆಗಲು ಕೊಟ್ಟು ಹೆಗಲಾದವರು
ಎಲ್ಲದಕೂ ಮಿಗಿಲಾದವರು..

ಹೀಗೀರುವಾಗ
ಯಾರು ಬಡವರು?
ಇಲ್ಲದೆಯೂ ಎಲ್ಲವನು ಉಳ್ಳವರೇ?
ಉಳ್ಳವರಾಗಿ ಇಲ್ಲದವರೇ?

ಸಚಿನ್‌ಕುಮಾರ ಬ. ಹಿರೇಮಠ ಬಾಗಲಕೋಟೆ ಜಿಲ್ಲೆಯ ರನ್ನ ಮುಧೋಳದವರು.
ಸದ್ಯ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕವಿತೆ, ಕತೆ ಹಾಗೂ ಬಿಡಿಬರಹಗಳ ಲೇಖನಗಳ ಬರೆಹದ ಜೊತೆಗೆ ಓದು ಇವರ ಆಸಕ್ತಿ ಕ್ಷೇತ್ರ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ