Advertisement
ರೂಪಶ್ರೀ ಕಲ್ಲಿಗನೂರ್‌ ಬರೆದ ಎರಡು ಕವಿತೆಗಳು

ರೂಪಶ್ರೀ ಕಲ್ಲಿಗನೂರ್‌ ಬರೆದ ಎರಡು ಕವಿತೆಗಳು

ಟ್ರಾಫಿಕ್ಕಿನಲಿ
ನಿಂತಾಗೊಮ್ಮೆ
ಗಮನಿಸಿ
ಎಷ್ಟೇ ದೊಡ್ಡ, ಸಣ್ಣಗಾಡಿಯಿರಲಿ
ಗಾತ್ರದಲೋ
ಶ್ರೇಷ್ಟತೆಯಲೋ
ಎಲ್ಲದರ ಮೇಲೂ
ಒಂದೊಂದು
ನೆಗ್ಗು ಇದ್ದೇ ಇರುತ್ತದೆ
ಥೇಟು
ಮನುಷ್ಯರಂತೆ…

ಎಷ್ಟೆಲ್ಲ ಹೆದರುತ್ತಿದ್ದೆ ಕತ್ತಲಿಗೆ
ಈ ಹಿಂದೆ…
ಅಲ್ಲಿ ಇರಬಹುದೇನೋ ಹುಲಿ, ಚಿರತೆ,
ಕಾಣದ ಕಾಯ… ಅಥವಾ ದೈಯ

ಜಗ್ಗೆಂದು
ಸೀಳಿ ಕತ್ತಲ
ಎದೆಯ ಮೇಲೇರಿ
ಬರಬಹುದು
ಕತ್ತು ಸೀಳಬಹುದು
ಕುತ್ತಿಗೆ ಮುರಿಯಬಹುದು
ಹೆಚ್ಚು ಮಿಸುಕಾಡಿದಲ್ಲಿ
ಮೂಳೆಗಳ
ಚಟಚಟನೇ ಪುಡಿಗಟ್ಟಬಹುದು…

ಊಹೂಂ..
ಈಗೀಗ ಗೊತ್ತಾಗಿದೆ
ಕತ್ತಲಲ್ಲಿ
ಬೆಳಕಿಗೆ ಕಾದುನಿಂತ
ಕನಸುಗಳಿವೆ..
ಅಷ್ಟೇ
ನಿಜದ ಕತ್ತಲಿರುವುದು
ನಮ್ಮ ಅಪನಂಬಿಕೆಗಳಲ್ಲಿ
ನಂಬಿಸಿ
ಬಗೆವ ದ್ರೋಹಗಳಲ್ಲಿ
ಹಿಡಿದ ಹೂವಿನ ಕಾಂಡದಲ್ಲಿರುವ
ಮುಳ್ಳುಗಳಲ್ಲಿ ಅಷ್ಟೇ..‌

About The Author

ರೂಪಶ್ರೀ ಕಲ್ಲಿಗನೂರ್

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಕಾಡೊಳಗ ಕಳದಾವು ಮಕ್ಕಾಳು' ಮಕ್ಕಳ ನಾಟಕ . 'ಚಿತ್ತ ಭಿತ್ತಿ' ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.

2 Comments

  1. Narayan Yaji

    ಎರಡೂ ಕವನಗಳು ಮನುಷ್ಯನ ಒರಟುತನ ಮತ್ತು ಅವನ ಅಂತರಂಗ ಬಯಸುವ ಬೆಳಕಿಗೆ ಒಡ್ಡುವ ಗುಣಗಳ ಕಾರಣಗಳಿಂದ ಪರಸ್ಪರ ಅವಲಂಬಿತವಾಗಿದೆ. ಒಳ್ಳೆಯ ಕವನ ಓದಲು ಸಿಕ್ಕಿತು.

    Reply
  2. Vasantha kumar

    “ನಿಜದ ಕತ್ತ್ತಲಿರುವದು ನಮ್ಮ ಅಪನಂಬಿಕೆಗಳಲ್ಲಿ” ಖಂಡಿತಾ ಹೌದು! ಸಣ್ಣದೊಂದು ಪದ್ಯದಲ್ಲಿ ಎಷ್ಟೆಲ್ಲಾ ಹೇಳಿದ್ದೀರಿ. ಅಭಿನಂದನೆಗಳು.

    Reply

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ