Advertisement

ಕೆಂಡಸಂಪಿಗೆ

ಕಾಫಿ ಮತ್ತು ಕಾಫಿರರ ಕಥೆ!: ದರ್ಶನ್‌ ಜಯಣ್ಣ ಸರಣಿ

ಕ್ರಿಶ್ಚಿಯನ್ ದೇಶವಾದ ಇಥಿಯೋಪಿಯಾದಲ್ಲಿ ಕಾಫಿ ಉಗಮವಾದರೂ ಅದು ಪ್ರವರ್ಧಮಾನಕ್ಕೆ ಬಂದದ್ದು ಇಂದಿನ ಕಾಫಿಯಾಗಿ ರೂಪುಗೊಂಡಿದ್ದು ಮಾತ್ರ ಇಸ್ಲಾಮಿಕ್ ದೇಶಗಳಲ್ಲಿ ಅಂದರೆ ದಕ್ಷಿಣ ಅರೇಬಿಯಾ ಇಂದಿನ ಯೆಮೆನ್, ಸೌದಿಯ ದಕ್ಷಿಣನ ಅಭಾ ಪ್ರಾಂತ್ಯಗಳಲ್ಲಿ. ಒಟ್ಟೋಮನ್ ಸುಲ್ತಾನ ಕಾಫಿಯ ಶಕ್ತಿಯನ್ನು ಬಲ್ಲವನು ಈ ಬೀಜಗಳನ್ನು ರಫ್ತು ಮಾಡಬೇಕಾದರೆ ಹುರಿದೇ ಮಾಡಬೇಕೆಂಬ ಗಟ್ಟಿ ಫರ್ಮಾನು ಹೊರಡಿಸಿದ್ದ ಮತ್ತದು ಶತಮಾನಗಳ ಕಾಲ ಚಾಲ್ತಿಯಲ್ಲಿತ್ತು. ಇದಕ್ಕೆ ಕಾರಣ ಕಾಫಿ ಬೇರೆಲ್ಲೂ ಬೆಳೆಯಲು ಆಗಬಾರದು ಎಂಬ ಆಲೋಚನೆ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಹನ್ನೆರಡನೆಯ ಕಂತು

Read More

ಮೊಹಮ್ಮದ್ ಚಾಚಾ!: ದರ್ಶನ್‌ ಜಯಣ್ಣ ಸರಣಿ

ಅವರು ಇಲ್ಲಿನ 45-50 ಡಿಗ್ರಿ ಉಷ್ಣಾಂಶವನ್ನ ಬಳಸಿಕೊಂಡು ಪ್ಲಾಸ್ಟಿಕ್‌ನ ಡಬ್ಬಿಯಲ್ಲಿ ತಾವು ತಂದ ಆಹಾರವನ್ನು ಬಿಸಿ ಮಾಡಿಕೊಳ್ಳುವುದನ್ನು ನೋಡಿ ಸಂಕಟವೂ ಆಯಿತು. ಏನಾದರೂ ಮಾಡಬೇಕಲ್ಲ ಎಂದು ಯೋಚಿಸುವಾಗ ಒಂದು ಹೊಸ tupperware ನ ಊಟದ ಡಬ್ಬಿಯನ್ನು ತಂದುಕೊಡುವುದು ಸೂಕ್ತ ಅಂತ ಅನ್ನಿಸಿತು.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಹನ್ನೊಂದನೆಯ ಕಂತು

Read More

ಅವಳಿ ನಗರಗಳ ದರ್ಶನ: ದರ್ಶನ್‌ ಜಯಣ್ಣ ಸರಣಿ

ಇದೆಲ್ಲಕ್ಕೆ ಶಿಕರಪ್ರಾಯದಂತೆ ಇದ್ದುದು ಅಲ್ಲಿನ ಆಲ್ ಕರಾ ಗುಹೆ. ನೋಡಲಿಕ್ಕೆ ನಮ್ಮ ಬದಾಮಿಯ ಗುಹೆಯ ಬಣ್ಣವಿರುವ ಇದು ಸಾವಿರಾರು ವರ್ಷಗಳ ಹಿಂದೆ ಇಲ್ಲಿದ್ದ ಸಮುದ್ರದಿಂದ ರೂಪುಗೊಂಡಿರುವುದಾಗಿಯೂ ಅದರ ಒಳಮೈಯಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಇರುವುದಾಗಿಯೂ ಅಲ್ಲಿನ ಗೈಡ್ ನಮಗೆ ಹೇಳಿದರು. ಅದರ ಎತ್ತರ ಆಕೃತಿ ನಮ್ಮ ಶಿರಸಿಯ ಯಾಣದಂತಿದೆಯಾದರೂ ಒಂದು ಲಾವಾದ ಪರಿಣಾಮದಿಂದ ಮತ್ತೊಂದು ಮರಳುಗಾಡಿನಲ್ಲಿ ಯಾವಾಗಲೋ ಬಿದ್ದ ಬೀಳುತ್ತಿದ್ದ ಮಳೆಯಿಂದ ಆಗಿರಬಹುದೆಂದು ನಂತರ ನಾನು ತಿಳಿದುಕೊಂಡೆ.

Read More

ಪುಸ್ತಕ ಕೊಳ್ಳಲು ಹೋದವನಿಗೆ ಲೈಬ್ರರಿ ಕೊಟ್ಟವರು: ದರ್ಶನ್‌ ಜಯಣ್ಣ ಸರಣಿ

ಮಾತು ಕಥೆಯೆಲ್ಲ ಮುಗಿದಮೇಲೆ ಕಾರಿನ ಡಿಕ್ಕಿ ಮತ್ತೊಮ್ಮೆ ತೆಗೆಯಲು ಹೇಳಿದರು. ನಾನೂ ಹಾಗೆಯೇ ಮಾಡಲಾಗಿ ಸಾರಾ ಮತ್ತು ಆಲ್ವಿನ್ ದಂಪತಿಗಳು ತಮ್ಮ ಕಾರಿನಿಂದ ಹಲವು ಬ್ಯಾಗುಗಳಲ್ಲಿದ್ದ ನೂರಾರು ಪುಸ್ತಕಗಳನ್ನು ನಾನು ಕೇಳದೆಯೇ ಉಚಿತವಾಗಿ ನನ್ನ ಕಾರಿಗೆ ಸೇರಿಸಿದರು. ನಾನು ಇವೆಲ್ಲವನ್ನೂ ಯಾವಾಗ ಓದುವುದು ಎಂದು ಯೋಚಿಸುತ್ತಿದ್ದೆ! ಬೇಡವೆಂದರೂ ಅವರು ಕೇಳಲಿಲ್ಲ. ಹೀಗೆ ಪುಸ್ತಕ ಕೊಳ್ಳಲು ಹೊರಟವನಿಗೆ ಲೈಬ್ರರಿಯೇ ದೊರಕಿದ್ದು ಅತ್ಯಂತ ಚೇತೋಹಾರಿ ಸಂಗತಿ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿ

Read More

ಖಾದ್ರಿಗಳು ಮತ್ತು ಅವರ ಬದುಕು!: ದರ್ಶನ್‌ ಜಯಣ್ಣ ಸರಣಿ

“ನಮ್ಮ ಮನೆಯಲ್ಲಿ ನಾನೇ ಚಿಕ್ಕವನು ಮತ್ತು ಓದಿದ್ದು ನಾನೊಬ್ಬನೇ, ನನ್ನೆಲ್ಲಾ ಒಡಹುಟ್ಟಿದವರು ತೀರಿಹೋಗಿದ್ದಾರೆ. ಹರೆಯದರಲ್ಲೇ ಇಲ್ಲಿಗೆ ಬಂದದ್ದರಿಂದ ಯಾರೊಟ್ಟಿಗೂ ಅಂತಹಾ ಗೆಳೆತನವೂ ಉಳಿದಿಲ್ಲ. ನಮಗೆ ಮಕ್ಕಳಿಲ್ಲವಾದುದರಿಂದ ನನ್ನ ಹೆಂಡತಿಗೂ ಇಲ್ಲಿನ ಜೀವನ, ಅನಾಮಿಕತೆ, ಬೇಡದ ವಿಷಯಗಳಲ್ಲಿ ತಲೆಹಾಕುವ ಜನಗಳ ಕಿರಿ ಕಿರಿ ಯಾವುದೂ ಇಲ್ಲ ಮತ್ತು ಬೇಡವಾಗಿದೆ. ಅವಳಿಗೂ ಅಲ್ಲಿ ಹೇಳಿಕೊಳ್ಳುವ ಬಂಧು- ಬಂಧ ಎರಡೂ ಇಲ್ಲ. ಇಲ್ಲೂ ಇಲ್ಲ ಅನ್ನಿ, ಆದರೆ ನಾವಿಲ್ಲಿಗೆ ಒಗ್ಗಿ ಹೋಗಿದ್ದೇವೆ! ನಾನು ಬದುಕಿರುವವರೆಗೂ ನನ್ನ ವೀಸಾದಲ್ಲಿ ಅವಳಿಲ್ಲಿ ಇರಬಹುದು. ಆಮೇಲಿನದ್ದು ‘ಅಲ್ಲಾಹುವಿನ’ ಇಚ್ಛೆ. ಸತ್ತರೇ ಅವನದ್ದೇ ಮಣ್ಣಿನಲ್ಲಿ ಹೂಳುತಾರೆ. ಮತ್ತೇನು ಬೇಕು?”
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ