ಕನಸಿನಲ್ಲೂ ಬಯಸದ ಒಂದು ಭೀಕರ ಅಪಘಾತ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಮೊದಲನೇ ಹಂತದಲ್ಲಿ ಅದಿರು ದೊರಕಲಿಲ್ಲವೆಂದರೆ ಎರಡನೇ ಹಂತಕ್ಕೆ ಅಂದರೆ ಮತ್ತೆ ನೂರು ಅಡಿಗಳ ಆಳಕ್ಕೆ ಇಳಿದು ಅಲ್ಲಿನ ಸುರಂಗಗಳಲ್ಲಿ ನಡೆದುಹೋಗಿ ಚಿನ್ನದ ಅದಿರಿನ ಕಲ್ಲುಗಳನ್ನು ಹುಡುಕಿ ಹೊಡೆದು ತರಬೇಕಾಗಿತ್ತು. ಸುರಂಗಗಳಲ್ಲಿ ಗಾಳಿ ತೀರಾ ಕಡಿಮೆ ಇದ್ದು ಸಂಪೂರ್ಣವಾಗಿ ಕತ್ತಲೇ ತುಂಬಿಕೊಂಡಿರುತ್ತದೆ. ಸುರಂಗಗಳಲ್ಲಿ ಹಳ್ಳ-ಕೊಳ್ಳ ಕೆಸರು ನೀರು ಕಲ್ಲು-ಮಣ್ಣು ಕಲ್ಲುಬಂಡೆಗಳು ಎಲ್ಲವನ್ನೂ ದಾಟಿ ಹೋಗಬೇಕಾಗುತ್ತದೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ
