ಕಲ್ಲುಬಂಡೆ ಮೇಲೆ ಕುಳಿತಿದ್ದ ಸೆಲ್ವಂ, ಸತ್ತುಹೋದನು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಮಣಿಗೂ ಅವರು ಹೇಳುವುದು ಸರಿ ಎನಿಸಿತು. ತಾಯಿ ಮತ್ತು ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಒಂದೇ ದಿನದಲ್ಲಿ ಮಣಿಯ ಹೆಗಲಿಗೆ ಜಾರಿಬಿದ್ದಿತ್ತು. ಸುಮತಿಯ ಮದುವೆಯನ್ನೂ ಮಾಡಬೇಕಾಗಿತ್ತು. ಕಾರ್ಮಿಕ ಮುಖಂಡರು, ಮಣಿ ಮತ್ತು ಕನಕಳಿಗೆ ಸಾಂತ್ವನ ಹೇಳಿ ಮಣಿಗೆ ಕೆಲಸಕ್ಕೆ ಅರ್ಜಿ ಹಾಕಲು ಎಲ್ಲ ಕಾಗದ ಪತ್ರಗಳನ್ನು ಬೇಗನೆ ತಯಾರುಮಾಡಿ ಕೊಡುವಂತೆ ಹೇಳಿ ಹೊರಟುಹೋದರು. ಆರ್ಮುಗಮ್, ಮಣಿಗೆ ಆದಷ್ಟು ಬೇಗನೆ ಕೆಲಸ ಮಾಡಿಕೊಡುವಂತೆ ಅಯ್ಯಪ್ಪನಿಗೆ ಹೋಗುವ ಮುಂಚೆ ಕೇಳಿಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ
