Advertisement

ಎಸ್. ಜಯಶ್ರೀನಿವಾಸ ರಾವ್

ಮೆಳ್ಳಿಗೇರಿ ಸರ್‌ ಸಲುವಾಗಿ ಶಾಲೆಯನ್ನೇ ಬದಲಾಯಿಸಿದ್ದೆ!

ವಿದ್ಯಾರ್ಥಿಗಳನ್ನು ನಾಲ್ಕು ಗುಂಪಾಗಿ ವಿಂಗಡಿಸಿ ಪ್ರತಿ ಗುಂಪಿಗೆ ಒಬ್ಬೊಬ್ಬ ಗಣಿತ ಪರಿಣತ ವಿದ್ಯಾರ್ಥಿಯನ್ನು ನಾಯಕನನ್ನಾಗಿ ಮಾಡಿದ್ದರು. ನನಗೆ ಒಂದು ಗುಂಪಿನ ಜಬಾಬ್ದಾರಿ ಕೊಟ್ಟಿದ್ದರು. ದೊಡ್ಡದಾಗಿರುವ ಮನೆಯ ಸಹಪಾಠಿಗಳ ಕೋಣೆಯೊಂದರಲ್ಲಿ ರಾತ್ರಿ ಕುಳಿತು ಗಣಿತ ಬಿಡಿಸುತ್ತಿದ್ದೆವು. ಅಲ್ಲೇ ಮಲಗಿ ಬೆಳಿಗ್ಗೆ ಮನೆಗೆ ಹೋಗುತ್ತಿದ್ದೆವು. ಹೀಗೆ ಸಹಪಾಠಿಗಳ ಮನೆಗೆ ಹೋಗಿ ಪಾಠ ಹೇಳುವುದನ್ನು ಮೊದಲಿನಿಂದಲೂ ಮಾಡುತ್ತಿದ್ದೆ. ಶ್ರೀಮಂತ ಹುಡುಗರ ತಾಯಂದಿರು ಬಡ ಹುಡುಗನ ತಾಯಿಯ ಮನೆಗೆ ಬಂದು “ಇವತ್ತು ನಿಮ್ಮ ಮಗನನ್ನು ನಮ್ಮ ಮನೆಗೆ ಕಳಿಸಿರಿ” ಎಂದು ಕೇಳುವುದು ನನಗೆ ಖುಷಿ ಕೊಡುತ್ತಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

‘ಕಾಲೇ ಕೋ ಜಿಂದಗಿ ನಹಿ’

ಎರಡನೇ ಮಹಾಯುದ್ಧದಲ್ಲಿ ಸ್ಟ್ಯಾಲಿನ್ ವಿಶಿಷ್ಟವಾದ ಯುದ್ಧತಂತ್ರಗಳಿಂದ ಫ್ಯಾಸಿಸ಼ಂ ಸೋಲಿಸಿದ್ದು ರೋಮಾಂಚನಕಾರಿಯಾಗಿದೆ. ಎಂಥ ಪ್ರಸಂಗದಲ್ಲೂ ಉತ್ಪಾದನೆ ನಿಲ್ಲಲಿಲ್ಲ. ಫ್ಯಾಸಿಸ್ಟ್ ಸೈನ್ಯ ದೇಶದೊಳಗೆ ನುಗ್ಗಿದಂತೆಲ್ಲ ಆ ಪ್ರದೇಶದಲ್ಲಿನ ಕಾರ್ಖಾನೆಗಳನ್ನು ಮೊದಲೇ ಮುಂದಿನ ಪ್ರದೇಶದಲ್ಲಿ ಶಿಫ್ಟ್ ಮಾಡಲಾಗುತ್ತಿತ್ತು. ಹೀಗಾಗಿ ವೈರಿಗಳಿಗೆ ಸಿಗದಂತೆ ಮತ್ತು ಉತ್ಪಾದನೆ ಸಂಪೂರ್ಣ ಸ್ಥಗಿತಗೊಳ್ಳದಂತೆ ಸ್ಟ್ಯಾಲಿನ್ ನೋಡಿಕೊಂಡಿದ್ದ. ಭಾರಿ ಹಿಮ ಬೀಳುವ ಸಂದರ್ಭದಲ್ಲೇ ಹಿಟ್ಲರನ ಸೈನ್ಯ ಮಾಸ್ಕೋ ಪ್ರವೇಶಿಸುವಂತೆ ಯೋಜನೆ ರೂಪಿಸಿದ್ದ. ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

900 ದಿನ ಫ್ಯಾಸಿಸ್ಟರ ಮುತ್ತಿಗೆಯಲ್ಲಿ ನಲುಗಿದ ಲೆನಿನ್‌ಗ್ರಾಡ್

ಎರಡನೇ ಮಹಾಯುದ್ಧದಲ್ಲಿ ಫ್ಯಾಸಿಸ್ಟರು 90 ಲಕ್ಷ ರಷ್ಯನ್ನರನ್ನು ಯಾತನಾಶಿಬಿರಗಳಲ್ಲಿ ಕೊಂದಿದ್ದಾರೆ. ಜನರನ್ನು ಕೊಲ್ಲಲು ಅವರು ಗ್ಯಾಸ್ ಚೇಂಬರ್‌ಗಳನ್ನು ಬಳಸಿದರು. ಮೃತದೇಹಗಳ ಕೊಬ್ಬನ್ನು ಸಾಬೂನು ಮತ್ತು ಹದಗೊಳಿಸಿದ ತೊಗಲು ತಯಾರಿಸಲು ಉಪಯೋಗಿಸಲಾಯಿತು. ಕೂದಲಿನಿಂದ ಹಾಸಿಗೆ ಮತ್ತು ಕಾಲ್ಚೀಲಗಳು ತಯಾರಾದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಲೆನಿನ್‌ಗ್ರಾಡ್‌ನಲ್ಲಿ ತಿರುಗಾಡಿದ ನೆನಪುಗಳು…

ಗಲೀನಾ ಹೇಳಿದ ಮೊದಲ ಪ್ರಸಂಗವೆಂದರೆ ತಾಯಿಯೊಬ್ಬಳು ತನ್ನ ಕೂಸನ್ನು ನೀರಲ್ಲಿ ಮುಳುಗಿಸಿದ ಹೃದಯವಿದ್ರಾವಕ ಘಟನೆ. ಹಿಟ್ಲರನ ಸೈನ್ಯ ಸೋವಿಯತ್ ದೇಶದ ಹಳ್ಳಿಯೊಂದನ್ನು ಸುತ್ತುವರಿದಿತ್ತು. ರಾತ್ರಿಯ ಗಾಢಾಂಧಕಾರ ಕಳೆದ ಕೂಡಲೆ ಆ ದಟ್ಟ ಅರಣ್ಯದ ಮಧ್ಯದಲ್ಲಿನ ಹಳ್ಳಿಯ ಮೇಲೆ ಬೆಳಗಿನ ಜಾವ ದಾಳಿ ಮಾಡುವ ಯೋಜನೆಯನ್ನು ಹಿಟ್ಲರನ ಸೈನ್ಯ ರೂಪಿಸಿತ್ತು. ಈ ಸುದ್ದಿ ಗೊತ್ತಾಗಿದ್ದರಿಂದ ಆ ಹಳ್ಳಿಗರು ರಾತ್ರಿಯೆ ಹಳ್ಳಿಯನ್ನು ಬಿಟ್ಟು ಬೇರೆಕಡೆ ಹೋಗಬೇಕಿತ್ತು. ರಂಜಾನ್‌ ದರ್ಗಾ ಬರೆಯುವ ಆತ್ಮಕತೆಯ ಸರಣಿ

Read More

ಆ ತಂಪು ವಾತಾವರಣದಲ್ಲೂ ಬೆವರಿದೆ…

ಕೊನೆಗೆ ಗಲೀನಾಗೆ ವಿವರಿಸಬೇಕಾಯಿತು. ನಾನು ಬಹಳ ದುಃಖಿಯಾಗಿದ್ದೇನೆ. ನನ್ನ ಯುವಜನಾಂಗವನ್ನು ನಿಮ್ಮ ಯುವಜನಾಂಗದ ಜೊತೆ ಹೋಲಿಕೆ ಮಾಡಿಕೊಂಡು ನೋವನ್ನು ಅನುಭವಿಸುತ್ತಿದ್ದೇನೆ. ಅಲ್ಲದೆ ನನ್ನ ಸಂಸ್ಕಾರ ಬೇರೆಯೆ ಇದ್ದುದರಿಂದ ಈ ಕುಣಿತ ಸಾಧ್ಯವೇ ಇಲ್ಲದ ಮಾತು ಎಂದೆ. ಅವಳು ಅರ್ಥ ಮಾಡಿಕೊಂಡಳು. ‘ನಾನು ಉತ್ತರ ಭಾರತದ ಪ್ರವಾಸದಲ್ಲಿದ್ದಾಗ ಅಲ್ಲಿನ ಬಡತನ ನೋಡಿ ಮರುಗಿದ್ದೆ’ ಎಂದು ತಿಳಿಸಿದ ಅವಳು, ‘ಐ ಯಾಮ್ ಸೋ ಪ್ರೌಢ ಆಫ್ ಯು’ ಎಂದಳು. ಆ ಸ್ಥಳದಿಂದ ವಾಪಸ್ ಬಂದೆವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 52ನೇ ಕಂತು ನಿಮ್ಮ ಓದಿಗೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ