ಉಜ್ಬೆಕಿಸ್ತಾನದ ನೆನಪಿನಲ್ಲಿ ಇತಿಹಾಸದ ನೋಟಗಳು
ನಮ್ಮ ಗೈಡ್, ಇತಿಹಾಸ ತಜ್ಞೆ ಗುಲ್ಚೆಹರಾ ನಮ್ಮನ್ನು ಈ ಮದ್ರಸಾ ಮುಂದೆ ಇರುವ ಬೃಹತ್ತಾದ ಏಕಶಿಲಾ ಕುಂಡವನ್ನು ತೋರಿಸಿದಳು. ಅದು ಒಂದು ಟ್ಯಾಂಕರ್ ನೀರು ತುಂಬುವಷ್ಟು ಆಳ ಮತ್ತು ಅಗಲ ಹೊಂದಿದೆ. ೧೯೧೭ರಲ್ಲಿ ರಷ್ಯಾದಲ್ಲಿ ನಡೆದ ಅಕ್ಟೋಬರ್ ಮಹಾಕ್ರಾಂತಿ ನಡೆದ ಘಟನೆಯಲ್ಲಿ ಕಮ್ಯುನಿಸ್ಟ್ ಸರ್ಕಾರ ಬಂದದ್ದು ಗೊತ್ತಾದ ಕೂಡಲೆ ಸಮರಕಂದದ ಯುವತಿಯರು ತಮ್ಮ ಬುರ್ಖಾಗಳನ್ನು ತಂದು ಈ ಕುಂಡದಲ್ಲಿ ಹಾಕಿ ಸುಟ್ಟರು ಎಂದು ಗುಲ್ ಚೆಹರಾ ತಿಳಿಸಿದಳು. ಹಾಗೆ ಬುರ್ಖಾಗಳನ್ನು ಸುಟ್ಟವರಲ್ಲಿ ಆಗ ಯುವತಿಯಾಗಿದ್ದ ತನ್ನ ಅಜ್ಜಿಯೂ ಇದ್ದಳೆಂದು ಹೇಳಿದಳು. ನಮಗೆಲ್ಲ ಆಶ್ವರ್ಯವೆನಿಸಿತು. ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗೆಲೆಲ್ಲʼ ಸರಣಿಯ ೪೬ನೇ ಕಂತು ಇಂದಿನ ಓದಿಗಾಗಿ
Read More
