ಅವರ ಬದುಕು ಅರ್ಥವಾಗದೆ ನಮ್ಮ ಬದುಕು ವ್ಯರ್ಥ
ನನ್ನ ತಂದೆಯ ಕಡೆಯಿಂದ ಹಣ ಪಡೆದು ಏನೋ ತರಲು ನನ್ನ ತಾಯಿ ತಿಳಿಸುತ್ತಿದ್ದಳು. ನಾನು ಮರೆಗುಳಿಯಾಗಿದ್ದರಿಂದ ಅಂಗಿಯ ಕೆಳಗೆ ಗಂಟು ಹಾಕಿ ಕಳಿಸುತ್ತಿದ್ದಳು. ಶ್ರೀ ಸಿದ್ಧೇಶ್ವರ ರಸ್ತೆಯ ಮರಗಳ ಸಾಲಿನ ನೆರಳಲ್ಲಿ ನನ್ನ ತಂದೆಯ ಬಳಿ ಹೋಗುವ ಮೊದಲೆ ಅಂಗಿಯ ಗಂಟು ಹಾಕಿದ ವಿಚಾರವೇ ಮರೆತುಹೋಗುತ್ತಿತ್ತು! ಹೀಗೇಕೆ ಗಂಟು ಹಾಕಿಕೊಂಡಿರುವೆ ಎಂದು ನನಗೆ ನಾನೇ ಬೇಸರಪಟ್ಟುಕೊಂಡು ಅದನ್ನು ಬಿಚ್ಚುತ್ತಿದ್ದೆ. ನನ್ನ ತಂದೆ ಕೆಲಸ ಮಾಡುವ ಅಡತಿ ಅಂಗಡಿಗೆ ಹೋದಾಗ ಸೇಂಗಾ ಕೊಡಿಸಲು ಹೇಳುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿ
