Advertisement

ಕೆಂಡಸಂಪಿಗೆ

ಕಾವ್ಯದಿಂದ ಏನನ್ನು ನಿರೀಕ್ಷಿಸುತ್ತೇವೆ?: ಕಮಲಾಕರ ಕಡವೆ ಕೃತಿಗೆ ಸಿರಾಜ್‌ ಅಹಮದ್‌ ಮುನ್ನುಡಿ 

‘ಮುಗಿಯದ ಮಧ್ಯಾಹ್ನʼ ಸಂಕಲನದಲ್ಲಿ ಸೂಚಿಸುವ ಹಾಗೆ ನಿಧಾನ ನಿಧನದತ್ತ ಸಾಗಿರುವ ಸುತ್ತಲಿನ ಜಗತ್ತಿನ ಬಗೆಗೆ ಕವಿ ಬಹಳ ವ್ಯಾಕುಲನಾಗಿದ್ದಾನೆ. ಇನ್ನೊಂದು ಬಗೆಯಲ್ಲಿ ಇದರಿಂದ ಅವನ ಅಂತರಂಗವೂ ಕ್ರಮೇಣ ವಿಕೃತಗೊಂಡಿರುವ ಸೂಚನೆಗಳು ಇಲ್ಲಿ ಸಿಗುತ್ತವೆ. ಹಕ್ಕಿ ಕಂಡರೂ ಅದು ಏರುವ ವಿಸ್ತಾರವನ್ನು ಕಾಣದ ಅದರ ಹಾರಾಟವನ್ನು ಶಂಕಿಸುವ ಮನಸುಗಳಿಗೆ ಮೊದಲು ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗಿ ಹೋಗುವ ದುರಂತವನ್ನು ಕವಿ ಕಾಣಿಸುತ್ತಾನೆ.
ಕಮಲಾಕರ ಕಡವೆ “ವಲಸೆ ಹಕ್ಕಿಗಳ ಹುಯಿಲು” ಕವನ ಸಂಕಲನಕ್ಕೆ ‌ಎಸ್ ಸಿರಾಜ್‌ ಅಹಮದ್‌ ಮುನ್ನುಡಿ

Read More

ಕವಿಜೋಡಿಯ ದುರಂತಗೀತ

ಕವಿಜೋಡಿಯ ದುರಂತ ಅಂತ್ಯವೂ ಬಹಳ ಪರಿಣಾಮಕಾರಿಯಾಗಿ ನಿರೂಪಿತವಾಗಿದೆ. ಕಾವ್ಯದೇವಿಯೇ ಹೇಳಿ ಮಾಡಿಸಿದಂಥ ಜೋಡಿಯೊಂದು ಪರಸ್ಪರರ ವಿಶ್ವಾಸ ನಂಬಿಕೆಗಳನ್ನು ಉಳಿಸಿಕೊಳ್ಳಲಾಗುವುದಿಲ್ಲ. ತನ್ನ ಗಂಡ ಆಸಿಯಾ ಎಂಬುವವಳ ಜೊತೆ ಸಲಿಗೆಯಿಂದ ಇರುವುದನ್ನು ಸಹಿಸಲಾಗದೆ ತಮ್ಮಿಬ್ಬರ ಪ್ರೇಮದ ಕುರುಹಾಗಿದ್ದ ಕವಿಕುಟೀರದಿಂದ ಅವನ ಕವಿತೆ-ಟಿಪ್ಪಣಿಗಳ ಪುಸ್ತಕವನ್ನು ಸುಟ್ಟು ಟೆಡ್ ನನ್ನು ಹೊರಹಾಕುವುದು..
ಎಸ್. ಸಿರಾಜ್‌ ಅಹಮದ್‌ ಬರೆಯುವ ಅಂಕಣ

Read More

ಮುಸ್ಲಿಮರ ಆತಂಕ ಮತ್ತು ಅನಿಶ್ಚಿತ ಭವಿಷ್ಯ

ಗಜಾಲಾ ವಹಾಬ್ ಬರೆದ ಈ ಪುಸ್ತಕದಲ್ಲಿ ಚಿಂತನಶೀಲ ಬರಹಗಳಿವೆ.  ಇಸ್ಲಾಮಿನ ಧಾರ್ಮಿಕ ರಚನೆ-ನೀತಿನಿಯಮಗಳ ಇತಿಹಾಸವನ್ನು ಆಳವಾಗಿ ಶೋಧಿಸುತ್ತ ಪ್ರವಾದಿಯವರ ಮರಣಾನಂತರ ಖಲೀಫರ ಕಾಲದಿಂದ ಧಾರ್ಮಿಕ ಏಕಸ್ವಾಮ್ಯಕ್ಕಾಗಿ   ಶಿಯಾ ಸುನ್ನಿಗಳ ನಡುವಿನ ಮತಬೇಧಗಳು, ಕುಲೀನ ಆಶ್ರಫ್, ಸೈಯದ್ ಮತ್ತು ಪಠಾಣರ ನಡುವಿನ ಶ್ರೇಣೀಕರಣಗಳು ಮುಸ್ಲಿಮ್ ಸಮಾಜವನ್ನು ಒಳಗಿನಿಂದಲೇ ಹೇಗೆ ಶಿಥಿಲಗೊಳಿಸಿದವು ಎಂದು ದಾಖಲಿಸುತ್ತಾರೆ. ಡಾ. ಎಸ್. ಸಿರಾಜ್ ಅಹ್ಮದ್‍ ಲೇಖನ ಇಲ್ಲಿದೆ. 

Read More

ದಾಂಪತ್ಯ ವ್ಯವಸ್ಥೆಯ ಕಟು ವಿಮರ್ಶೆ

ಹಾಗೆ ನೋಡಿದರೆ ಸ್ವಾತಂತ್ರ್ಯ ಚಳವಳಿ- ಮುಖ್ಯವಾಗಿ ರಾಷ್ಟ್ರೀಯತೆಯ ಉಚ್ಛ್ರಾಯದ ಸಂದರ್ಭದಲ್ಲಿ ಹೆಣ್ಣಿನ ಸ್ಥಾನಮಾನ, ಶಿಕ್ಷಣ ಮೊದಲಾದವುಗಳ ಬಗ್ಗೆ ಬಹಳ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯಿತು. ಕನ್ನಡದ ಮೊದಲ ಕಾದಂಬರಿಗಳಲ್ಲಿ ಮತ್ತು ಭಾರತದ ಇತರ ಭಾಷೆಗಳ ಆರಂಭದ ಕಾದಂಬರಿಗಳಲ್ಲೂ ಹೆಣ್ಣಿನ ಪ್ರಶ್ನೆ ಬಹಳ ಮುಖ್ಯವಾಗಿ ಚರ್ಚಿತವಾಯಿತು. ಹಾಗಿದ್ದರೂ ಹೆಣ್ಣಿನ ಸ್ಥಿತಿಯಲ್ಲಿ ನಿರ್ಣಾಯಕವಾದ ಬದಲಾವಾಣೆ ಯಾಕೆ ಸಾಧ್ಯವಾಗಲಿಲ್ಲ? ಸ್ವಾತಂತ್ರ್ಯ ಚಳವಳಿ ತನ್ನ ತೀವ್ರತೆಯನ್ನು ಮುಟ್ಟಿದರೂ, ರಾಷ್ಟ್ರೀಯವಾದಿ ಭಾವನೆಗಳು ಪರಾಕಾಷ್ಠೆಗೆ ತಲುಪುತ್ತಿದ್ದರೂ ಸ್ತ್ರೀ ಸ್ವಾತಂತ್ರ್ಯದ ಪ್ರಶ್ನೆ ಯಾಕೆ ಇದ್ದಕ್ಕಿದ್ದಂತೆ ಗೌಣವಾಯಿತು ಎಂಬ ಬಗ್ಗೆ ಪಾರ್ಥಾ ಚಟರ್ಜಿಯಂಥ ಚಿಂತಕರು ಆಳವಾದ ಚಿಂತನೆ ನಡೆಸಿದ್ದಾರೆ.

Read More

ಕಿಕ್ಕಿರಿದ ಭಾಷೆಗಳ ಕಾಡಿನಲ್ಲಿ ಓಡಾಡಿದ ಜಿ.ಎನ್.ದೇವಿ ಅವರೊಡನೆ ಮಾತುಕತೆ

ಪ್ರೊ. ಜಿ. ಎನ್. ದೇವಿ ಅಂತರರಾಷ್ಟ್ರೀಯ ಖ್ಯಾತಿಯ ಭಾಷಾ ವಿದ್ವಾಂಸರು. ಬರೋಡಾದ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ದೇವಿಯವರು ಮೂಲತಃ ಸಾಹಿತ್ಯ ವಿಮರ್ಶಕರು. ತಮ್ಮ‌ ವೃತ್ತಿಗೆ ರಾಜೀನಾಮೆ ನೀಡಿ, ಆದಿವಾಸಿಗಳ ಭಾಷೆಗಳ ಅಧ್ಯಯನವನ್ನು ಕೈಗೆತ್ತಿಕೊಂಡವರು. ಪ್ರಪಂಚದ ಎಲ್ಲಾ ಬುಡಕಟ್ಟು ಭಾಷೆಗಳ ಗಣತಿ ಮಾಡುವ ಬೃಹತ್ ಕಾರ್ಯಯೋಜನೆಯ ಜವಾಬ್ದಾರಿಯನ್ನು ದೇವಿಯವರಿಗೆ  ಯುನೆಸ್ಕೋ ವಹಿಸಿದೆ. ಭಾಷೆಗಳ ಕುರಿತು…

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ