Advertisement

Category: ದಿನದ ಪುಸ್ತಕ

ಬನ್ನಿ ನಾವೆಲ್ಲರೂ ಕಾಣೆಯಾಗೋಣ…: ಕನ್ನಡಕ್ಕೆ ಬಂದ ಮೇರಿ ಆಲಿವರ್‌ ಕವಿತೆಗಳು

“ನನ್ನ ಚಿತ್ತವನ್ನ ಅನಂತದ ಮೇಲೆ ಇರಿಸಲಿಲ್ಲವೆಂದಾದರೆ ಏನೋ ಸರಿ ಇಲ್ಲ ಅಂತ ಅನ್ನಿಸುವುದು. ಲೋಕದಲ್ಲಿ ನಾನೊಂದು ಪುಟಾಣಿ ಮೊಳೆಯಾಗಬೇಕು, ಪುಟ್ಟದಾದರೂ ಉಪಯೋಗಕ್ಕೆ ಬರುವಂಥದ್ದು. ಎಂದೆಂದಿಗೂ ಈ ತೊರೆಯಲ್ಲಿಯೇ ಇದ್ದು ಬಿಡಬೇಕೆನಿಸುತ್ತದೆ. ಗಾಳಿಮಡಿಲ ಹೂ, ಮುಳ್ಳು ಕಂಟಿಯ ಹೂ, ಬೇಲಿ ಹೂಗಳನ್ನ ತುಂಬು ಗೌರವದಿಂದ ಕಾಣಬೇಕೆನಿಸಿದೆ.”
ಅಮೆರಿಕದ ಕವಯತ್ರಿ ಮೇರಿ ಆಲಿವರ್‌ ಅವರ ಕೆಲವು ಕವಿತೆಗಳನ್ನು ಚೈತ್ರಾ ಶಿವಯೋಗಿಮಠ ಕನ್ನಡಕ್ಕೆ ತಂದಿದ್ದು “ಆಕಾಶ ನದಿ ಬಯಲು” ಶೀರ್ಷಿಕೆಯಡಿಯಲ್ಲಿ ಸಂಗ್ರಹ ಪ್ರಕಟವಾಗಿದೆ. ಈ ಕೃತಿಯ ಒಂದಷ್ಟು ಕವಿತೆಗಳು ಹಾಗೂ ಮೇರಿ ಆಲಿವರ್‌ ಪರಿಚಯಾತ್ಮಕ ಪುಟಗಳು ನಿಮ್ಮ ಓದಿಗೆ

Read More

ತಂದೆಯವರೊಂದಿಗಿನ, ಮಗನ ನೆನಪುಗಳು: ಪಾಲಾಕ್ಷಪ್ಪ ಎಸ್.ಎನ್. ಬರಹ

ಕುವೆಂಪುರವರನ್ನು ನೋಡಲು ಬರುವವರ ಬಗ್ಗೆ, ಸಂದರ್ಶನಗಳಿಂದ ವಿಶ್ರಾಂತಿಗೆ ಆಗುತ್ತಿದ್ದ ತೊಂದರೆ ಬಗ್ಗೆ, ಆಚರಿಸಿಕೊಳ್ಳದ ಹುಟ್ಟು ಹಬ್ಬದ ಬಗ್ಗೆ, ಅಣ್ಣನನ್ನು ಪ್ರೀತಿಸುವ ಜನರ ಬಗ್ಗೆ, ಸಾಹಿತ್ಯವಲಯದ ಪಿತೂರಿ, ಶೀತಲ ಸಮರದ ಬಗ್ಗೆ, ಎದುರಿಸಿದ ವಿರೋಧಗಳ ಬಗ್ಗೆ, ತಮ್ಮ ಹುದ್ದೆಯ ನಿರ್ವಹಣೆ ಸಂದರ್ಭದ ಕೆಲ ಘಟನೆಗಳ ಬಗ್ಗೆ, ಬಸವೇಶ್ವರ, ವಿವೇಕಾನಂದರ ಬಗೆಗಿನ ಅಭಿಪ್ರಾಯ, ಅಡ್ಡಪಲ್ಲಕ್ಕಿ, ಪಾದಪೂಜೆಗಳ ಬಗೆಗಿನ ತಿರಸ್ಕಾರ, ‘ಮಂತ್ರ ಮಾಂಗಲ್ಯ’ ಸರಳ ವಿವಾಹದ ಬಗ್ಗೆ, ಮಕ್ಕಳ ಮದುವೆಯನ್ನು ಸರಳವಾಗಿ ನೆರವೇರಿಸಿದ ಬಗ್ಗೆ ಒಂದಿಷ್ಟು ವಿವರಗಳು ಈ ಕೃತಿಯಲ್ಲಿವೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬರೆದ “ಅಣ್ಣನ ನೆನಪು” ಕೃತಿಯ ಕುರಿತು ಪಾಲಾಕ್ಷಪ್ಪ ಎಸ್.ಎನ್. ಬರಹ ನಿಮ್ಮ ಓದಿಗೆ

Read More

ಬಹು ಆಯಾಮದ ಕವಿತೆಗಳು: ಎನ್.ಎಸ್. ಶ್ರೀಧರ ಮೂರ್ತಿ ಮುನ್ನುಡಿ

ಕವಿತೆಯ ಆರಂಭದಲ್ಲಿ ಕವಿ ಸತ್ತು ಹೋಗಲು ಬಯಸುವ ಚಿತ್ರಣ ಬರುತ್ತದೆ. ಅದೂ ಹಾಡ ಹಗಲು, ಸಾವಿನ ಕಾರಣ ಜೇಡದ ಉದರದ ಎಳೆ ಕಾಣಲು.. ದಾರಿಯ ತೋರಲು ಮೀಮಾಂಸಾ ಶಾಸ್ತ್ರದಲ್ಲಿ ಶಬ್ದ ಪ್ರಮಾಣಕ್ಕೆ ಮಹತ್ವದ ಸ್ಥಾನವಿದೆ, ಪ್ರತ್ಯಕ್ಷ, ಅನುಮಾನ, ಉಪಮಾನ, ಪ್ರಮಾಣಗಳಿಂದ ತಿಳಯಲಾಗದ್ದನ್ನು ‘ಶಬ್ದ ಪ್ರಮಾಣ’ದಿಂದ ತಿಳಿಯಬಹುದು. ಕಾರಣ ಧರ್ಮ ಭೌತವಸ್ತುವಲ್ಲ. ಧರ್ಮವನ್ನು ತಿಳಿಯಲು ವೇದ -ಅರ್ಥಾತ್ ಶಬ್ದವೊಂದೇ ಸಾಧನ ಅಥವಾ ಪ್ರಮಾಣ.
ಡಾ. ಅಜಿತ್‌ ಹರೀಶಿ ಕವನ ಸಂಕಲನ “ತೇಲಿಬಿಟ್ಟ ಆತ್ಮಬುಟ್ಟಿ”ಗೆ ಎನ್.ಎಸ್. ಶ್ರೀಧರ ಮೂರ್ತಿ ಮುನ್ನುಡಿ

Read More

ಕಾವ್ಯದಿಂದ ಏನನ್ನು ನಿರೀಕ್ಷಿಸುತ್ತೇವೆ?: ಕಮಲಾಕರ ಕಡವೆ ಕೃತಿಗೆ ಸಿರಾಜ್‌ ಅಹಮದ್‌ ಮುನ್ನುಡಿ 

‘ಮುಗಿಯದ ಮಧ್ಯಾಹ್ನʼ ಸಂಕಲನದಲ್ಲಿ ಸೂಚಿಸುವ ಹಾಗೆ ನಿಧಾನ ನಿಧನದತ್ತ ಸಾಗಿರುವ ಸುತ್ತಲಿನ ಜಗತ್ತಿನ ಬಗೆಗೆ ಕವಿ ಬಹಳ ವ್ಯಾಕುಲನಾಗಿದ್ದಾನೆ. ಇನ್ನೊಂದು ಬಗೆಯಲ್ಲಿ ಇದರಿಂದ ಅವನ ಅಂತರಂಗವೂ ಕ್ರಮೇಣ ವಿಕೃತಗೊಂಡಿರುವ ಸೂಚನೆಗಳು ಇಲ್ಲಿ ಸಿಗುತ್ತವೆ. ಹಕ್ಕಿ ಕಂಡರೂ ಅದು ಏರುವ ವಿಸ್ತಾರವನ್ನು ಕಾಣದ ಅದರ ಹಾರಾಟವನ್ನು ಶಂಕಿಸುವ ಮನಸುಗಳಿಗೆ ಮೊದಲು ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗಿ ಹೋಗುವ ದುರಂತವನ್ನು ಕವಿ ಕಾಣಿಸುತ್ತಾನೆ.
ಕಮಲಾಕರ ಕಡವೆ “ವಲಸೆ ಹಕ್ಕಿಗಳ ಹುಯಿಲು” ಕವನ ಸಂಕಲನಕ್ಕೆ ‌ಎಸ್ ಸಿರಾಜ್‌ ಅಹಮದ್‌ ಮುನ್ನುಡಿ

Read More

“ಚಾಂಡಾಳನೊಬ್ಬನ ಆತ್ಮ ವಿಮರ್ಶೆ”: ದೇವಿಕಾ ನಾಗೇಶ್‌ ಬರಹ

ಬಂಗಾಳದ ರಕ್ತ ಚರಿತ್ರೆಯನ್ನು ಲಕ್ಷಾಂತರ ಜನರ ನಿತ್ಯ ನರಕವನ್ನು ಪ್ರಭುತ್ವಗಳ ನಾಚಿಕೆಗೇಡಿನ ಹುಸಿತನವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಈ ಕೃತಿ ತೆರೆದಿಡುತ್ತದೆ. ಹಳೆಯ ಕಳೆದ ಶತಮಾನದ ಕೊನೆಯಲ್ಲಿ ನಮ್ಮ ದೇಶದಲ್ಲಿ ಹಲವು ಹೆಸರಾಂತ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಡೆಸಿದ ತಂತ್ರಗಾರಿಕೆಯನ್ನು ಅವರ ಅಸಲಿ ಮುಖವನ್ನು ತೆರೆದಿಡುತ್ತದೆ. “ವಿರೋಧಿಗಳು ನನಗೆ ಪ್ರೀತಿ ತೋರಿಸಿದಾಗ ಸಾಧ್ಯವಾಗದ್ದು, ಕೋಪ ತೋರಿಸಿದಾಗ ಸಾಧ್ಯವಾಗಿದೆ. ನನ್ನ ಕೋಪವನ್ನು ಅವರು ಜೀವಂತವಾಗಿಟ್ಟಿದ್ದಾರೆ. ಅವರ ಕೋಪದ ಫಲ ಶ್ರುತಿಯೇ ನನ್ನ ಪುಸ್ತಕ.” ಬ್ಯಾಪಾರಿಯವರ ಮಾತಿದು.
ಮನೋರಂಜನ್‌ ಬ್ಯಾಪಾರಿಯವರ ಆತ್ಮಕತೆಯನ್ನು ಡಾ. ಎಚ್. ಎಸ್.ನಾಗಭೂಷಣ “ಚಾಂಡಾಳನೊಬ್ಬನ ಆತ್ಮ ವಿಮರ್ಶೆ” ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದು ಇದರ ಕುರಿತು ದೇವಿಕಾ ನಾಗೇಶ್‌ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ