Advertisement

Category: ದಿನದ ಅಗ್ರ ಬರಹ

ಬಲ್ಲಿರೇನು ಕಾಡ ಹಣ್ಣುಗಳ ರುಚಿಯ?: ರೂಪಾ ರವೀಂದ್ರ ಜೋಶಿ ಸರಣಿ

ಎಳೆಯ ಕಾಯಿಗಳು ಬಲಿತು, ಕರ್ರಗೆ ಹೊಳೆಯುವ ಆ ಹಣ್ಣುಗಳು ಕಣ್ಣಿಗೆ ಬಿದ್ದರೆ ಮುಗಿಯಿತು. ಸ್ಪರ್ಧೆಗೆ ಬಿದ್ದವರಂತೇ, ನುಗ್ಗಿ ನುಗ್ಗಿ ಹಣ್ಣುಗಳನ್ನು ಕೊಯ್ದು ಚಪ್ಪರಿಸುತ್ತಿದ್ದೆವು. ಹುಳಿಯ ಜೊತೆಗೆ ಸವಿ ಬೆರೆತ ಆ ಮಧುರ ರುಚಿ ನೆನೆದರೆ, ಈಗಲೂ ಬಾಯಲ್ಲಿ ನೀರೂರುತ್ತದೆ. ಈ ಕವಳಿ ಕಾಯಿ ಕೊಯ್ದರೆ, ಹಾಲಿನಂಥ ಜಿಗುಟು ವಸರುತ್ತದೆ. ಈ ಜಿಗುಟಿನಿಂದ ನಮ್ಮ ಅಂಗಿಯೆಲ್ಲ ಕಲೆಯಾಗಿ, ಮನೆಯಲ್ಲಿ ನಿತ್ಯ ಬೈಗುಳದ ಹೂ ತಲೆಗೇರುತ್ತಿತ್ತು. ಆ ರುಚಿ ಹಣ್ಣಿನ ಮುಂದೆ, ಬೈಗುಳ, ಬಡಿತ ಇವೆಲ್ಲ ಯಾವ ಲೆಕ್ಕದ್ದು ಹೇಳಿ?
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಐದನೆಯ ಕಂತು

Read More

ದುಡ್ಡು ಬರ್ಲಿ ಐಸಾ… ಇನ್ನೂ ಕೊಡಿ ಐಸಾ…!: ಎಚ್. ಗೋಪಾಲಕೃಷ್ಣ ಸರಣಿ

ಅದರ ಮಾರನೇ ದಿವಸ ಹೋಗಿ ಭರಮಪ್ಪನ ಎದುರು ನಿಂತೆ. ಒಂದು ಗಂಟೆ ಕಾದೆ. ನನ್ನ ಕಡೆ ತಿರುಗಿ ನೋಡಲು ಸಹ ಅವರಿಗೆ ಪುರುಸೊತ್ತು ಇಲ್ಲರ. ಐದನೇ ದಿವಸವೂ ಇದೇ ರಿಪೀಟ್ ಆಯ್ತು. ಆರನೇ ದಿವಸ ಭಾನುವಾರ. ತೆಪ್ಪಗೆ ಮನೇಲೆ ಇದ್ದು ನನ್ನ ಅದೃಷ್ಟಕ್ಕೆ ಗಂಟೆ ಗಂಟೆಗೂ ಕೋಲಿನಿಂದ ಬಾರಿಸುತ್ತಾ ಕಳೆದೆ. ಸೋಮವಾರ ಬೆಳಿಗ್ಗೆ ಮತ್ತೆ ಕೆಇಬಿ ಆಫೀಸಿಗೆ ದಂಡ ಯಾತ್ರೆ ಮಾಡಿದೆ. ಜಗನ್ನಾಥ, ಅದೇ ಲೈನ್ ಮ್ಯಾನ್ ದಾರೀಲಿ ಸಿಕ್ಕಿದ. ನನ್ನನ್ನು ನೋಡಿ ಅವನ ಲೂನಾ ನಿಲ್ಲಿಸಿದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೈದನೆಯ ಕಂತು

Read More

ಬಾಗಿಲಿಗೆ ಬಂದ ಸ್ನೇಹಿತ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಹೊರಗೆ ಕುಳಿತಿದ್ದ ಸ್ವಾಮಿ, ಮಣಿ ಮತ್ತು ಕಾರ್‌ಅನ್ನು ರಸ್ತೆಯಲ್ಲಿ ಬರುವವರು ಹೋಗುವವರು ವಿಚಿತ್ರವಾಗಿ ನೋಡಿಕೊಂಡು ಹೋಗುತ್ತಿದ್ದರು. ಹತ್ತಿರದಲ್ಲಿ ನೀರಿನ ಟ್ಯಾಂಕ್ ಬರುವುದಕ್ಕೆ ಮುಂಚೆ ಮಹಿಳೆಯರು ಸರತಿಯಲ್ಲಿ ನಿಂತುಕೊಂಡು ಪ್ಲ್ಯಾಸ್ಟಿಕ್ ಬಿಂದಿಗೆಗಳೊಂದಿಗೆ ಜಗಳವಾಡುತ್ತಿದ್ದರು. ಸ್ವಾಮಿ, “ಮಣಿ ನಿನಗೆ ಎಷ್ಟು ಜನ ಮಕ್ಕಳು?” ಎಂದ. ಮಣಿ, “ಸ್ವಾಮಿ ಒಬ್ಬ ಮಗ, ಒಬ್ಬಳು ಮಗಳು. ಹುಡುಗ ಕಾಲೇಜ್ ಓದ್ತಾ ಇದ್ದಾಗಲೇ ಸತ್ತೋಗಿಬಿಟ್ಟ. ನಿನಗೆ ಸುಳ್ಳೇನು ಹೇಳುವುದು. ನನಗೆ ಗೊತ್ತಿಲ್ಲದೆ ಪೋಕರಿ ಹುಡುಗರ ಜೊತೆಗೆ ಸೇರಿಕೊಂಡು ಗಣಿಯಲ್ಲಿ ಕಳ್ಳತನ ಮಾಡುವುದಕ್ಕೋಗಿ ಅಪಘಾತದಲ್ಲಿ ಸತ್ತೋದ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೆಂಟನೆಯ ಕಂತು ನಿಮ್ಮ ಓದಿಗೆ

Read More

ಕಿಲ್ಲಿಂಗ್ ಫೀಲ್ಡ್ ಮತ್ತು ಬುದ್ಧ; ಇದು ಕಾಂಬೋಡಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಹಿಂದಿನ ಕಾಲದಲ್ಲಿ ಬಹುತೇಕ ಜನರು ಅನಕ್ಷರಸ್ಥರಾಗಿದ್ದರು. ಆದರೆ ಅಕ್ಷರ ಜ್ಞಾನ ಇಲ್ಲದವರೂ ಸಹ ಸಾಂಪ್ರದಾಯಿಕವಾದ ಮಹಾಕಾವ್ಯಗಳ ಕಥಾನಕವನ್ನು ಅರ್ಥಮಾಡಿಕೊಂಡಿದ್ದರು. ಬುದ್ಧನ ಜಾತಕ ಕಥೆಗಳ ಪರಿಚಯ ಬಹುತೇಕರಿಗಿತ್ತು. ರೀವಾಂಗ್ ಪ್ರೆಂಗ್ ಎಂಬ ಜಾನಪದ ಕಥೆಗಳನ್ನೂ ಸಹ ಅರಿತುಕೊಂಡವರಿದ್ದಾರೆ. ಪಾಶ್ಚಿಮಾತ್ಯ ಸಾಹಿತ್ಯ ಜಗತ್ತಿಗೆ ಕಾಂಬೋಡಿಯಾ ತೆರೆದುಕೊಂಡದ್ದು ತೀರಾ ತಡವಾಗಿ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಕಾಂಬೋಡಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

Read More

ಶೂನ್ಯ ಟಿಕೆಟ್’ನ ಒಂದು ಪ್ರಸಂಗ: ವಸಂತಕುಮಾರ್‌ ಕಲ್ಯಾಣಿ ಬರಹ

ಕಂಡಕ್ಟರ್ ಒಂದು ನಿರ್ಧಾರಕ್ಕೆ ಬಂದ. ಪೊಲೀಸರು ಬರಲಿ ಅವರೇ ನಿರ್ಧರಿಸಲಿ ಎಂದು ಬಸ್ ನಿಲ್ಲಿಸಲು ಡ್ರೈವರ್‌ಗೆ ಸೂಚಿಸಿದ. ಆದರೂ ಬಸ್ ನಿಲ್ಲಲಿಲ್ಲ. ಪೋಲೀಸರ ಪ್ರವೇಶ ಮಾತಿನಲ್ಲಿ ಆದದ್ದಕ್ಕೆ, ಈ ಮೂವರು “ಕರೆಸಯ್ಯ ನಾವು ನೋಡದೆ ಇರೋ ಪೋಲಿಸ್ರಾ… ಹೆದರಿಸ್ತೀಯಾ? ಕರೆಸೆ ಬಿಡು” ಎಂದು ದುಂಬಾಲು ಬಿದ್ದರು. (ಹಾಗೆ ನಟಿಸಿದರು) ಒಂದು ಸ್ಟಾಪ್ ಮುಂದೆ ಬಂದ ಬಸ್ ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು. ಐದು ನಿಮಿಷದಿಂದ ಯಾರಿಗೋ ಫೋನ್ ಮಾಡುತ್ತಾನೆ ಇದ್ದ ಕಂಡಕ್ಟರ್ “ಪೊಲೀಸರು ಬರ್ಲಿ; ಗೊತ್ತಾಗುತ್ತೆ” ಎನ್ನುತ್ತಾ. ಬಸ್ ಅನಿವಾರ್ಯವಾಗಿ ನಿಂತಿತು.
ವಸಂತಕುಮಾರ್ ಕಲ್ಯಾಣಿ ಬರೆದ ಶೂನ್ಯ ಟಿಕೇಟ್‌ ಒಂದರ ಪ್ರಸಂಗ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ