Advertisement

Category: ದಿನದ ಪುಸ್ತಕ

ಭಾವ ಬಿಡುಗಡೆಯ ನಿರುಮ್ಮಳ ಕಥೆಗಳು: ಪೂರ್ಣಿಮಾ ಭಟ್ಟ ಸಣ್ಣಕೇರಿ ಕಥಾಸಂಕಲನಕ್ಕೆ ಅಬ್ದುಲ್ ರಶೀದ್ ಮುನ್ನುಡಿ

ಪೂರ್ಣಿಮಾ ಅವರದು ಅವರೇ ತಮ್ಮ ಮಾತಿನಲ್ಲಿ ಹೇಳುವ ಹಾಗೆ ‘ಕತೆಗಾತಿಯ ವೇಷ’. ಕಥೆಯ ನಿರುದ್ವಿಗ್ನತೆ ಮತ್ತು ನೆಮ್ಮದಿಯ ದೃಷ್ಟಿಯಿಂದ ಈ ವೇಷ ಅಗತ್ಯ ಎಂದು ನನಗೆ ಇಷ್ಟೆಲ್ಲ ಬರೆದಾದ ಮೇಲೆ ಈಗ ಅನ್ನಿಸುತ್ತದೆ. ಬರೆಯುವವರು ತಮ್ಮದೇ ಕಥೆಯಲ್ಲಿ ಕಳೆದುಹೋಗುವ ಅಪಾಯದಿಂದ ಬಿಡುಗಡೆಗೊಳ್ಳುವ ದಾರಿ ಇದು. ಇದು ಬಹು ದೊಡ್ಡ ಸವಾಲಿನ ದಾರಿಯೂ ಹೌದು. ಬರೆಯುವವರಿಗೆ ಈ ದಾರಿಯಲ್ಲಿ ಕ್ರಮಿಸಲು ಬಹಳ ಲೋಕಜ್ಞಾನ ಇರಬೇಕಾಗುತ್ತದೆ. ಸಕಲ ಜೀವ ವ್ಯಾಪಾರಗಳ ಕುರಿತು ಒಂದು ಸಮತೂಕದ ನಿರ್ಲಿಪ್ತತೆ ಬೇಕಾಗುತ್ತದೆ.
ಪೂರ್ಣಿಮಾ ಭಟ್ಟ ಸಣ್ಣಕೇರಿ ಕಥಾಸಂಕಲನ “ಕತೆ ಜಾರಿಯಲ್ಲಿರಲಿ” ಕೃತಿಗೆ ಅಬ್ದುಲ್‌ ರಶೀದ್‌ ಬರೆದ ಮುನ್ನುಡಿ

Read More

`ಅಂತರಿಕ್ಷದಲ್ಲಿ ವಿಹಾ’ ಮಕ್ಕಳ ವೈಜ್ಞಾನಿಕ ಫ್ಯಾಂಟಸಿಯ ಲೋಕ: ಮಂಡಲಗಿರಿ ಪ್ರಸನ್ನ ಬರಹ

ವಿಹಾ ಮತ್ತು ಆಕೆಯ ಗೆಳೆಯ ಚಿಂಟು ಅವರ ಕೆಲ ವೈಜ್ಞಾನಿಕ ಸಂಭಾಷಣೆಗಳು ಆಸಕ್ತಿದಾಯಕ. ನಿದ್ದೆಯಲ್ಲೂ ಅಂತರಿಕ್ಷ, ರಾಕೇಟ್, ಪ್ಯಾರಾಚೂಟ್….. ಎಂದೆಲ್ಲ ಬಡಬಡಿಸುವ ವಿಹಾ, ಸ್ವೀಟೋ ಏಲಿಯನ್ಸ್ ಜೊತೆ ನಡೆಸುವ ಸಂಭಾಷಣೆ ಮಕ್ಕಳ ಯೋಚನಾ ಲಹರಿಯ ವಿಸ್ತಾರಕ್ಕೆ ಇಂಬುಕೊಟ್ಟಂತಿದೆ. ವಿಹಾಳ ಕನಸು, ಸ್ವೀಟೋ ಬಂದ ದಿನ, ಫ್ಲೈಯಿಂಗ್ ಸಾಸರ್‌ನಲ್ಲಿ ಏಲಿಯನ್ಸ್, ಅಂತರಿಕ್ಷದಲ್ಲಿ ವಿಹಾ, ಮೊದಲಾದ ಅಧ್ಯಾಯಗಳಲ್ಲಿ ವಿಹಾಳ ಸಾಹಸ, ಆಕೆಯ ಕಲ್ಪನಾ ಶಕ್ತಿ, ಧೈರ್ಯ, ಹೊಸತನ್ನು ಕಲಿಯಬೇಕು, ಮಾಡಬೇಕೆನ್ನುವ ಹಂಬಲದ ತುಡಿತವಿದೆ.
ವಸು ವತ್ಸಲೆ ಬರೆದ `ಅಂತರಿಕ್ಷಾದಲ್ಲಿ ವಿಹಾʼ ಮಕ್ಕಳ ಕೃತಿಯ ಕುರಿತು ಮಂಡಲಗಿರಿ ಪ್ರಸನ್ನ ಬರಹ

Read More

ಸಂಬಂಧ ಸೂಕ್ಷ್ಮಗಳ ಗಾಢ ಸ್ಪಂದನೆಯ ‘ನೀಲಿ ನಕ್ಷೆ’: ಸುನಂದಾ ಕಡಮೆ ಬರಹ

ದಿಕ್ಕನ್ನು ನೆನಪಿನಲ್ಲಿಟ್ಟುಕೊಳ್ಳುವಂತಿದ್ದ ಬೋರ್ಗರೆವ ನೀಲಿ ಕಡಲಿನ ಬಾಲ್ಯದ ಸಂಗಾತಿ ಸರಯೂ ನಂತರ ಹೋಗಿ ಸೇರಿದ ಮುಂಬೈ ನಗರದ ಮೂರೂ ಕಡೆಗಳಲ್ಲಿ ಸಮುದ್ರ ಕಂಡು ದಿಕ್ಕು ಗುರುತಿಸಲು ಬಾರದೇ ಗಲಿಬಿಲಿಗೊಂಡವಳು. ಮೊದಲನೇ ತರಗತಿಯಲ್ಲೇ ಮೂರನೇ ರ‍್ಯಾಂಕ್ ಬಂದಾಗ ಊರಿಗೆಲ್ಲ ಪೇಡೆ ಹಂಚಿ ಅಪ್ಪನಿಂದ ಹೊಡೆಸಿಕೊಂಡ ಅಮ್ಮನನ್ನು ಕಾಣುತ್ತ ಬೆಳೆದ ಸರಯೂ ಸದಾ ತನ್ನಪ್ಪ ತನ್ನನ್ನು ಕಡೆಗಣಿಸುತ್ತಿದ್ದಾನೆಯೇ ಎಂದು ವಾರಗಣ್ಣಲ್ಲೇ ಗಮನಿಸುತ್ತ ಬಂದವಳು.
ಅಮಿತಾ ಭಾಗವತ್‌ ಕಾದಂಬರಿ ‘ನೀಲಿ ನಕ್ಷೆ’ಯ ಕುರಿತು ಸುನಂದಾ ಕಡಮೆ ಬರಹ ನಿಮ್ಮ ಓದಿಗೆ

Read More

‘ಅಮ್ಮನ್ ಮನೆ ಅಪೀ. ಹೆದರ್ಕ್ಯಳಡʼ…: ಜಯರಾಮ ಹೆಗಡೆ ಜೀವನ ಕಥನದ ಆಯ್ದ ಭಾಗ

ಜಯರಾಮ ಹೊರಗೆ ಬಂದು ಮಡಿ ಬಿಚ್ಚಿ ಅಂಗಿ ಚಡ್ಡಿ ಹಾಕಿಕೊಳ್ಳುವಾಗಲೂ ಕೈ ಕಾಲು ನಡುಕ ಹೋಗಿಲ್ಲ. ಹೊರಬಂದ ಮೇಲೆ ಹೊರಾಂಗಣದಿಂದಲೇ ಒಂದು ಸುತ್ತು ಪ್ರದಕ್ಷಿಣಿ ಹಾಕಿ ದೇವರಿಗೆ ಒಂದು ಸಲ ಕೈಮುಗಿದು ಹೋಗುವುದು ರೂಢಿ. ಹಾಗೇ ಇವನೂ ಆಚೀಚೆ ನೋಡದೆ ಸುತ್ತು ಪ್ರದಕ್ಷಿಣೆ ಬರುತ್ತಿದ್ದಾನೆ. ಏಕಾಏಕಿ ದೇವಾಲಯದ ಮೇಲ್ಛಾವಣಿಯ ಕಡೆ ದೃಷ್ಟಿ ಹೋದಾಗ ಏನನ್ನು ಕಾಣುತ್ತಾನೆ? ನಾನಾ ವಿಧದ ಹಾವುಗಳು ನೇತಾಡುತ್ತಿವೆ. ಅವವುಗಳೇ ಜೊತೆಯಾಟ ಆಡುತ್ತಿವೆ.
ಜಯರಾಮ ಹೆಗಡೆ ಜೀವನ ಕಥನ ‘ಬೀದಿಯ ಬದುಕು’ ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

Read More

ಖಂಡಕಾವ್ಯಕ್ಕೊಂದು ಪ್ರವೇಶ: ಯು.ಆರ್.ಅನಂತಮೂರ್ತಿ ಮುನ್ನುಡಿ

ಆತ್ಮ ಸಫಲತೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಹೆಣ್ಣು ಪ್ರಣಯಿನಿಯಾಗಿಯೂ, ಹೆಂಡತಿಯಾಗಿಯೂ, ಮಗಳಾಗಿಯೂ, ತಾಯಿಯಾಗಿಯೂ, ‘ಬಜಾರಿ’ಯಾಗಿಯೂ ಅವನಿಗೆ ಒದಗುತ್ತಾಳೆ. ಇದನ್ನು ನಟಿಸಿ ತೋರಲು ತೇಜಶ್ರೀ ಕವನದಲ್ಲಿ ಒಂದು ಅಪರೂಪದ ಕಾವ್ಯ ಪ್ರಯೋಗವಿದೆ. ಇಲ್ಲಿ ಬರುವ ಅವನು ಪುರಾಣದ ಕೃಷ್ಣನೂ ಹೌದು, ನಿಜದ ಅವನೂ ಹೌದು. ಹಾಗೆಯೇ ರಾಧೆ ಪುರಾಣದ ರಾಧೆಯೂ ಹೌದು, ನಿಜದ ಅವಳೂ ಹೌದು. ಈ ಎರಡು ಸತ್ಯಗಳೂ ಒಟ್ಟಾಗಿ ನಮಗೆ ಭಾಸವಾಗುವುದರಿಂದ ಸಾಮಾಜಿಕ ಸಾಂಸಾರಿಕ ನೀತಿ ಅನೀತಿಗಳನ್ನು ಈ ಕವನ ಮೀರುತ್ತದೆ.
ಜ.ನಾ. ತೇಜಶ್ರೀ ಖಂಡಕಾವ್ಯ “ಅವನರಿವಲ್ಲಿ” ಕೃತಿಗೆ ಯು.ಆರ್.‌ ಅನಂತಮೂರ್ತಿ ಮುನ್ನುಡಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ