ಭಾವ ಬಿಡುಗಡೆಯ ನಿರುಮ್ಮಳ ಕಥೆಗಳು: ಪೂರ್ಣಿಮಾ ಭಟ್ಟ ಸಣ್ಣಕೇರಿ ಕಥಾಸಂಕಲನಕ್ಕೆ ಅಬ್ದುಲ್ ರಶೀದ್ ಮುನ್ನುಡಿ
ಪೂರ್ಣಿಮಾ ಅವರದು ಅವರೇ ತಮ್ಮ ಮಾತಿನಲ್ಲಿ ಹೇಳುವ ಹಾಗೆ ‘ಕತೆಗಾತಿಯ ವೇಷ’. ಕಥೆಯ ನಿರುದ್ವಿಗ್ನತೆ ಮತ್ತು ನೆಮ್ಮದಿಯ ದೃಷ್ಟಿಯಿಂದ ಈ ವೇಷ ಅಗತ್ಯ ಎಂದು ನನಗೆ ಇಷ್ಟೆಲ್ಲ ಬರೆದಾದ ಮೇಲೆ ಈಗ ಅನ್ನಿಸುತ್ತದೆ. ಬರೆಯುವವರು ತಮ್ಮದೇ ಕಥೆಯಲ್ಲಿ ಕಳೆದುಹೋಗುವ ಅಪಾಯದಿಂದ ಬಿಡುಗಡೆಗೊಳ್ಳುವ ದಾರಿ ಇದು. ಇದು ಬಹು ದೊಡ್ಡ ಸವಾಲಿನ ದಾರಿಯೂ ಹೌದು. ಬರೆಯುವವರಿಗೆ ಈ ದಾರಿಯಲ್ಲಿ ಕ್ರಮಿಸಲು ಬಹಳ ಲೋಕಜ್ಞಾನ ಇರಬೇಕಾಗುತ್ತದೆ. ಸಕಲ ಜೀವ ವ್ಯಾಪಾರಗಳ ಕುರಿತು ಒಂದು ಸಮತೂಕದ ನಿರ್ಲಿಪ್ತತೆ ಬೇಕಾಗುತ್ತದೆ.
ಪೂರ್ಣಿಮಾ ಭಟ್ಟ ಸಣ್ಣಕೇರಿ ಕಥಾಸಂಕಲನ “ಕತೆ ಜಾರಿಯಲ್ಲಿರಲಿ” ಕೃತಿಗೆ ಅಬ್ದುಲ್ ರಶೀದ್ ಬರೆದ ಮುನ್ನುಡಿ
