ಕಾಫಿ ಮತ್ತು ಕಾಫಿರರ ಕಥೆ!: ದರ್ಶನ್ ಜಯಣ್ಣ ಸರಣಿ
ಕ್ರಿಶ್ಚಿಯನ್ ದೇಶವಾದ ಇಥಿಯೋಪಿಯಾದಲ್ಲಿ ಕಾಫಿ ಉಗಮವಾದರೂ ಅದು ಪ್ರವರ್ಧಮಾನಕ್ಕೆ ಬಂದದ್ದು ಇಂದಿನ ಕಾಫಿಯಾಗಿ ರೂಪುಗೊಂಡಿದ್ದು ಮಾತ್ರ ಇಸ್ಲಾಮಿಕ್ ದೇಶಗಳಲ್ಲಿ ಅಂದರೆ ದಕ್ಷಿಣ ಅರೇಬಿಯಾ ಇಂದಿನ ಯೆಮೆನ್, ಸೌದಿಯ ದಕ್ಷಿಣನ ಅಭಾ ಪ್ರಾಂತ್ಯಗಳಲ್ಲಿ. ಒಟ್ಟೋಮನ್ ಸುಲ್ತಾನ ಕಾಫಿಯ ಶಕ್ತಿಯನ್ನು ಬಲ್ಲವನು ಈ ಬೀಜಗಳನ್ನು ರಫ್ತು ಮಾಡಬೇಕಾದರೆ ಹುರಿದೇ ಮಾಡಬೇಕೆಂಬ ಗಟ್ಟಿ ಫರ್ಮಾನು ಹೊರಡಿಸಿದ್ದ ಮತ್ತದು ಶತಮಾನಗಳ ಕಾಲ ಚಾಲ್ತಿಯಲ್ಲಿತ್ತು. ಇದಕ್ಕೆ ಕಾರಣ ಕಾಫಿ ಬೇರೆಲ್ಲೂ ಬೆಳೆಯಲು ಆಗಬಾರದು ಎಂಬ ಆಲೋಚನೆ.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಹನ್ನೆರಡನೆಯ ಕಂತು
ಗುರು ಮತ್ತು ಹಕ್ಕಿಗೂಡು: ಸುಕನ್ಯಾ ಕನಾರಳ್ಳಿ ಅಂಕಣ
ಗಾಂಧೀಜಿ ಒಮ್ಮೆ ಯರವಾಡ ಜೈಲಿನಲ್ಲಿದ್ದಾಗ ಒಂದು ರಾತ್ರಿ ಬರಿಯ ದುಃಸ್ವಪ್ನಗಳೇ ಬಿದ್ದು ಬೆಚ್ಚಿದ್ದಾಗ ವಿಚಾರಿಸಿದರಂತೆ. ಹಿಂದಿನ ರಾತ್ರಿಯ ಅಡಿಗೆಯನ್ನು ಒಬ್ಬ ಕೊಲೆಗಡುಕ ಅಪರಾಧಿ ಮಾಡಿದ್ದಾನೆಂದು ತಿಳಿದು ಅಂದಿನಿಂದ ರಾತ್ರಿಯ ಊಟವನ್ನೇ ಬಿಟ್ಟರಂತೆ. ನಮ್ಮ ಸೂಕ್ಷ್ಮ ಶರೀರದ ಚೈತನ್ಯ ಇನ್ನೊಬ್ಬರಿಗೂ ಅನುಭವಕ್ಕೆ ಬರುತ್ತದೆ ಎಂದು ಅರಿವಾಗುವುದು ಬ್ರಹ್ಮವಿದ್ಯೆಯೇನೂ ಅಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ಉಳಿದು ಹೋಗುವುದೆಂದರೆ… ವಿನಾಯಕ ಅರಳಸುರಳಿ ಅಂಕಣ
ಮುಂದಿನ ಕೆಲ ವರ್ಷಗಳ ಕಾಲ ಆ ಪತ್ರ ಹಾಗೆಯೇ ಇಲ್ಲದ ಅಜ್ಜನ ಹೆಸರನ್ನು ವಿಳಾಸವಾಗಿಸಿಕೊಂಡು ಬಂದು ನಮಗೆಲ್ಲ ಶುಭಾಶಯ ಹೇಳುತ್ತಿತ್ತು. ಕೊನೆಗೊಂದು ದಿನ ಯಾರಿಂದಲೋ ಗೊತ್ತಾದ ವಿಷಯವೇನೆಂದರೆ ಆ ಪತ್ರದ ಬುಡದಲ್ಲಿ ‘ಶುಭಕೋರುವವರು – ABC ಆಚಾರ್’ ಎಂದು ಬರೆದಿರುತ್ತಿದ್ದ, ಅಜ್ಜ ಹೇಳುತ್ತಿದ್ದ ಆಚಾರ್ ಇದ್ದರಲ್ಲ, ಅವರೂ ತೀರಿಹೋಗಿ ಕೆಲ ವರ್ಷಗಳೇ ಆಗಿದ್ದವು! ಅವರ ಮಗನೇ ಅವರ ಹೆಸರಿನಲ್ಲಿ ಈ ಶುಭಾಶಯ ಪತ್ರವನ್ನು ಗ್ರಾಹಕರಿಗೆ ಕಳಿಸುತ್ತಿದ್ದ! ಹೇಗೆ ಅವರ ದೃಷ್ಟಿಯಲ್ಲಿ ತೀರಿಹೋದ ಬಳಿಕವೂ ಅಜ್ಜ ಜೀವಂತವಾಗಿದ್ದನೋ ಹಾಗೇ ನಮ್ಮೆಲ್ಲರ ದೃಷ್ಟಿಯಲ್ಲಿ ಆಚಾರರೂ ಜೀವಂತವಾಗಿದ್ದರು!
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”
ನಿಜ ಆಸ್ಟ್ರೇಲಿಯಾ ಎಂಬ ಪ್ರಶ್ನೆ: ವಿನತೆ ಶರ್ಮಾ ಅಂಕಣ
ನಮಗೆ ಗೊತ್ತಿರುವ ಹೊಸ ಆಸ್ಟ್ರೇಲಿಯಾದ ಉಧ್ಭವ ಮತ್ತು ಬೆಳೆದಿದ್ದು ಅದೆಷ್ಟು ವಿವಾದಗಳನ್ನೊಳಗೊಂಡಿತ್ತು, ಎಂದು ಒತ್ತಿ ಹೇಳುತ್ತದೆ. ಆಸ್ಟ್ರೇಲಿಯಾದ ಬಗ್ಗೆ ಈಗಲೂ ಇರುವ ಸುಳ್ಳುಪೊರೆಗಳನ್ನು ಛೇದಿಸುತ್ತಾ ಕಾರ್ಯಕ್ರಮವು ವೀಕ್ಷಕರ ಮುಂದೆ ಅನೇಕ ಸಾಕ್ಷ್ಯಗಳನ್ನು ಇಡುತ್ತದೆ. ಹಿಂದಿನ ರಾಜಕೀಯ ನಾಯಕರು, ಪ್ರಮುಖ ಸರ್ಕಾರಿ ಅಧಿಕಾರಿಗಳು, ಚರಿತ್ರೆ-ದಾಖಲೆಗಳನ್ನು ಅಭ್ಯಸಿಸುವ ನಿಪುಣರು, ಅಬೊರಿಜಿನಲ್ ಆಸ್ಟ್ರೇಲಿಯನ್ ವಿದ್ವಾಂಸರು ಮತ್ತು ಹಿರಿಯರು ಎಂಬಂತೆ ನೂರಾರು ಜನರನ್ನು ಸಂದರ್ಶಿಸಿ ಅವರ ದೃಷ್ಟಿಕೋನಗಳನ್ನು ತೋರಿಸಿದ ಈ ಸರಣಿ ಡಾಕ್ಯುಮೆಂಟರಿ ಬಹಳ ಉಪಯುಕ್ತವಾಗಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಕನ್ನಡ ಮನಸ್ಸು ಪ್ರೀತಿಯನ್ನು ಪರಿಭಾವಿಸುವ ರೀತಿ: ಎಲ್.ಜಿ.ಮೀರಾ ಅಂಕಣ
ಆಧುನಿಕ ಕನ್ನಡ ಸಾಹಿತ್ಯದ ಬಹಳ ಮುಖ್ಯ ಘಟ್ಟವಾದ ನವೋದಯದಲ್ಲಿ ಪ್ರೇಮವನ್ನು ದಾಂಪತ್ಯದೊಳಗಿದ್ದಾಗ ಸಂಭ್ರಮಿಸುವ ಹಾಗೂ ಒಂದು ವೇಳೆ ಅದು ದಾಂಪತ್ಯದ ಹೊರಗಿದ್ದಾಗ ಅದನ್ನು ತ್ಯಾಗ ಮಾಡುವ ಮನೋಧರ್ಮ ಕಾಣುತ್ತಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿದ್ದ ನವ ಭಾರತ ನಿರ್ಮಾಣದ ಆಶಯ, ಸುಧಾರಣಾವಾದ, ಬ್ರಿಟಿಷರ ಕಣ್ಣಲ್ಲಿ ಭಾರತದ `ಸಭ್ಯ ಸಂಸ್ಕೃತಿ’ಯನ್ನು ಎತ್ತಿ ಹಿಡಿಯುವ ನೈತಿಕ ತವಕ ಇವು ಕುವೆಂಪು, ಬೇಂದ್ರೆ, ಪುತಿನ ಮುಂದೆ ಕೆ.ಎಸ್.ನರಸಿಂಹಸ್ವಾಮಿ ಇವರೆಲ್ಲರ ಪ್ರೀತಿಯ ಚಿತ್ರಣವನ್ನು ಪ್ರಭಾವಿಸಿದವು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ತೊಂಡೆ ಚಪ್ಪರ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ
ಅಮ್ಮನ ಈ ಸ್ವಾಭಾವ ಗೊತ್ತಿದ್ದ ನನಗೆ ತೊಂಡೆ ಚಪ್ಪರ ಗಾಳಿಗೆ ಹೀಗೆ ಮೂರು ಕಾಲಲ್ಲಿ ನಿಂತದ್ದು ನೋಡಿ ದಿಗಿಲಾಯಿತು. ನಾನು ಕೃಷಿ ಕೆಲಸವನ್ನು ಬಿಟ್ಟು ಬಹಳ ವರ್ಷಗಳೇ ಆಗಿಹೋಗಿವೆ. ಹಾಗಾಗಿ ಅಷ್ಟು ದೊಡ್ಡ ಚಪ್ಪರವನ್ನು ಅಪ್ಪನ ಹಾಗೆ ಹಿಡಿದು ನಿಲ್ಲಿಸಿ ಸರಿ ಮಾಡುವ ವಿಶ್ವಾಸ ನನಗೆ ಇರಲಿಲ್ಲ. ಅಮ್ಮನ ಮುಖ ನೋಡಿದೆ. ಬದುಕಿನ ಆಧಾರವೇ ಕಳೆದುಕೊಂಡ ಹಾಗೆ ಕೂತಿದ್ದು ನೋಡಿ ಬೇಸರ ಆಯ್ತು. ಸಮಾಧಾನದ ಮಾತು ಹೇಳುವ ಅಂತ ಅನ್ನಿಸಿದರೂ ಮಾತು ಹೊರಡದೆ ಅಮ್ಮನ ಹತ್ತಿರ ಸುಮ್ಮನೆ ಕುಳಿತೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಎರಡನೆಯ ಬರಹ
ಗುರುವಿನ ಎದುರಲ್ಲಿ: ಸುಕನ್ಯಾ ಕನಾರಳ್ಳಿ ಅಂಕಣ
ಏನೇ ಆದರೂ ಇದು ತುಂಬ ಅಸಹಜ ಅಂತನ್ನಿಸಿತ್ತು. ತನ್ನ ವಯಸ್ಸಿನ ಸ್ನೇಹಿತರೇ ಇಲ್ಲದ, ಹೆಚ್ಚು ಹೆಚ್ಚು ಮಾನವೀಯಗೊಳಿಸುವ ಕಲೆಗಳ ಪರಿಚಯವಿಲ್ಲದ, ವಯಸ್ಸಿಗೆ ತಕ್ಕ ಜೀವನೋತ್ಸಾಹ ಇಲ್ಲದ, ಮುದುಕಿಯರ ಜೊತೆ ತೀರ್ಥಯಾತ್ರೆಗೆ ಹೋಗುವ, ಉಳಿದಂತೆ ಜನಸಂಪರ್ಕ ತೀರಾ ಕಮ್ಮಿಯಿರುವ ಬದುಕಿನ ಶೈಲಿಯ ಪರಿಣಾಮವೇ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂರನೆಯ ಬರಹ
ಕನ್ನಡ ಪ್ರಜ್ಞೆ: ಸುಕನ್ಯಾ ಕನಾರಳ್ಳಿ ಅಂಕಣ
ನನ್ನ ಮನೆಗೆ ಯಾವ ಮಕ್ಕಳು ಬಂದರೂ ಕನ್ನಡದಲ್ಲಿ ಮಾತಾಡೋದಾದ್ರೆ ಮಾತ್ರ ಒಳಗೆ ಬನ್ನಿ ಅಂತ ಯಾವ ಮುಲಾಜಿಲ್ಲದೆ ಹೇಳಿಬಿಡ್ತೀನಿ. ಮೊನ್ನೆ ಮಹಾ ತರಾತುರಿಯಲ್ಲಿ ನಾಲ್ಕು ಮಕ್ಕಳು ಬಾಗಿಲು ಬಡಿದ್ರು. ಎಲ್ರೂ ಇಂಗ್ಲೀಶಲ್ಲಿ ಒಟ್ಟಿಗೆ ಮಾತಾಡ್ತಾ ಇದ್ರು. ಅವರನ್ನ ತಡೆದು ನಿಲ್ಲಿಸಿ ‘ಕನ್ನಡದಲ್ಲಿ ಹೇಳಿ’ ಅಂದೆ. ತಟ್ಟನೆ ಮೌನ. ಅರೆ ಗಳಿಗೆಯ ನಂತರ ಒಂದು ಮಗು ಧೈರ್ಯ ಮಾಡಿ ‘ನಾವು ಪ್ಲೇ ಮಾಡ್ತಾ ಇದೀವಿ. ಅಲ್ಲಿ ಅಭಿ ಕೌಂಟ್ ಮಾಡ್ತಾ ಇದಾನೆ. ಅದಕ್ಕೆ ನಾವೆಲ್ಲ ರನ್ ಮಾಡಿಕೊಂಡು ಬಂದ್ವಿ. ನಿಮ್ಮನೇಲಿ ಹೈಡ್ ಮಾಡಿಕೊಬಹುದಾ?ʼನಾನು ಕೇಳಿದ್ದು ಕನ್ನಡದಲ್ಲಿ ಹೇಳಿ ಅಂತ, ಕಿಚಡಿಯಲ್ಲಿ ಅಲ್ಲ ಎಂದಿದ್ದು ಪಾಪ ಮಕ್ಕಳಿಗೆ ಅರ್ಥ ಆಗಲಿಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಎರಡನೆಯ ಬರಹ
ಅವಳ ಹೆಸರು ಗೀತ…: ವಿನಾಯಕ ಅರಳಸುರಳಿ ಅಂಕಣ
ಇದೊಂದು ಚಿಕ್ಕ ಕಾಳಜಿ, ಉಳಿದವರೆಲ್ಲರ ಉಪೇಕ್ಷೆಯ ನಡುವೆ ಆಕೆ ಮೆರೆದ ಸಣ್ಣ ಸಮಯ ಪ್ರಜ್ಞೆ ಎಂದು ಅನಿಸಬಹುದೇನೋ? ಆದರೆ ನೂರಾರು ಕೆಲಸಗಳ ನಡುವೆ ಮುಳುಗಿದಾಕೆ ತನ್ನದಲ್ಲದ ಧಾವಂತಕ್ಕಾಗಿ ಅವನ್ನೆಲ್ಲ ಬದಿಗಿಟ್ಟು ಸ್ವತಃ ಆಕ್ಸಿಜನ್ ಅಳವಡಿಸಿದ ಬೆಡ್ಡನ್ನು ದೂಡಿಕೊಂಡು ಬರುವುದು ಎಷ್ಟು ವಿರಳ ಹಾಗೂ ದೊಡ್ಡ ಮಾನವೀಯತೆಯೆನ್ನುವುದು ತಿಂಗಳಾನುಗಟ್ಟಲೆ ಆಸ್ಪತ್ರೆಯಲ್ಲಿ ಕಳೆದ ಬಳಿಕವಷ್ಟೇ ಅರ್ಥವಾಗುವ ಸೂಕ್ಷ್ಮ ಸತ್ಯ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”









