Advertisement
ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ  ಕವಿತೆ

ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

ತಾವಿಜ್…

ಮೂರು ದೃಷ್ಟಿ ಬೊಟ್ಟಿಟ್ಟು
ತುಸು ವಿಳೆದೆಲೆ ಸುಟ್ಟು..
ಕಸಬರಿಗೆ ನಿವಾಳಿಸಿ…
ನಿವಾಳಿ ತೆಗೆಯುವ ಅವ್ವ…

ನಾನು
ತುಸು ಹಳದಿ
ತುಸು ಸಣ್ಣ
ಇಲ್ಲಾ
ತುಸುವೆ ತುಸು
ಬಿಳಿಚಿ ಕೊಂಡರೆ…
ಕೆಂಡ ತುಳಿದವಳಂತೆ…
ಚಡಪಡಿಸುತ್ತಾಳೆ…
ಇಡೀ ಈಶ್ವರನನ್ನೇ
ಒಂದು ಇಂಚಿನ ತಾವಿಜ್ ಅಲ್ಲಿ
ಹಿಡಿದಿಟ್ಟಿನೆಂದೆ ನಂಬುತ್ತಾಳೆ…
ಅವ್ವ…

ಗುಡಿ ಗುಂಡಾರ್ ಸುತ್ತಿ..
ಗೊರವಪ್ಪ ಭೂತಪ್ಪನ
ಕಟ್ಟೆ ಹತ್ತಿ ತರುತ್ತಾಳೆ ತಾವಿಜ್…

ಅವಳ ನಂಬುಗೆಯ
ಈ ಬುಗ್ಗೆ ಒಡೆದು ಆಳುವುದು..
ಸ್ವತಃ ಆ ಶಿವನಿಗೂ ಆಗಲ್ಲವೆನೋ…

ಎರಡು ಸಂಜೆ ಕಳೆದು
ಮಾರನೆಯ ದಿನಕ್ಕೆ

ಆ ಶಿವನು ವಿಲ ವಿಲನೇ ಒದ್ದಾಡಿ..
ಅವ್ವನ ನಂಬಿಕೆಯ ಜೊತೆಗೆ ಗುದ್ದಾಡಿ..
ಸೋತ ಶಿವ
ನಾನು ಚೇತರಿಸಿ ಕೊಂಡಂತೆಯೂ…
ಮಾಡಿಬಿಡುತ್ತಾನೆ…

ಎಂತದೋ ಗಾಳಿ ಶಕವಂತೆ..
ಬಾಲ ಗ್ರಹವಂತೆ…
ಇಂತಹ ಅಂತೆ ಕಂತೆಗಳ…
ಮೆದುಳ ಜೋಳಿಗೆ ತುಂಬಿ ಬಂದ…
ಸುರ್ ಸುರ್ ಬತ್ತಿಗಳಿಗೆಲ್ಲ ಮಂತ್ರದಂಡ ನನ್ನ ಅವ್ವನ ತಾವಿಜ್..
ಅದು ಏಕ ಅನೋಕಾ ಚೀಜ್….

 

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ